ಪ್ರಜಾಸ್ತ್ರ ಸುದ್ದಿ
ಬೆಳಗಾವಿ: ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಹಂಚಿಕೆ ವಿಚಾರ ದೊಡ್ಡ ಚರ್ಚೆ ಹುಟ್ಟು ಹಾಕಿದೆ. ಯಾಕಂದರೆ ದೇವೇಗೌಡರ ಸೊಸೆ, ಎಚ್.ಡಿ ರೇವಣ್ಣನವರ ಪತ್ನಿ ಭವಾನಿ ರೇವಣ್ಣ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಆದರೆ, ಅವರ ಸ್ಪರ್ಧೆ ಇಲ್ಲ ಅನ್ನೋ ಪಕ್ಷದ ನಾಯಕರ ಮಾತು. ಹೀಗಾಗಿ ಕೌಟುಂಬಿಕ ಜಟಾಪಟಿ ನಡೆದಿದೆ.
ಈ ಬಗ್ಗೆ ಶುಕ್ರವಾರ ಮತ್ತೊಮ್ಮೆ ಸ್ಪಷ್ಟನೆ ನೀಡಿದ ಕುಮಾರಸ್ವಾಮಿ, ಹಾಸನಕ್ಕೆ ಭವಾನಿ ರೇವಣ್ಣ ಅನಿವಾರ್ಯ ಅಲ್ಲ. ಟಿಕೆಟ್ ವಿಚಾರದಲ್ಲಿ ನಮಗೆ ಗೊಂದಲವಿಲ್ಲ ಎಂದಿದ್ದಾರೆ. ಇನ್ನೊಂದು ವಾರದಲ್ಲಿ ಬಗೆಹರಿಯಲಿದೆ. ನಮಗೆ 30-40 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಕೊರತೆ ಇದೆ. ಹೊಸ ಮುಖಗಳಿದ್ದರೂ ಜನರ ವಿಶ್ವಾಸ ಪಡೆಯುವವರನ್ನು ಬೆಂಬಲಿಸುತ್ತೇವೆ ಅಂತಾ ಹೇಳಿದ್ದಾರೆ. ಹೀಗಾಗಿ ಭವಾನಿ ರೇವಣ್ಣರಿಗೆ ಟಿಕೆಟ್ ಸಿಗೋದು ಡೌಟ್ ಆಗಿದೆ.
ಇನ್ನು ರಮೇಶ ಜಾರಕಿಹೊಳಿ ಅವರ ಸಿಡಿ ವಿಚಾರ ಪ್ರಸ್ತಾಪಿಸಿ ಮಾತನಾಡಿದರು. ಸಿಡಿ ತಯಾರಿಕೆ, ಕಾರ್ಖಾನೆ ಬಗ್ಗೆ ಮಾತನಾಡುವಷ್ಟು ಸಮಯವಿಲ್ಲ. ಇದನ್ನು ಇಟ್ಟುಕೊಂಡು ಚುನಾವಣೆ ಎದುರಿಸಲು ಸಾಧ್ಯವೇ? ಜನರ ಮುಂದೆ ಇದನ್ನು ಇಟ್ಟುಕೊಂಡು ಮತಗಳಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.