ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕರ್ನಾಟಕ ಹೈಕೋರ್ಟ್ ಎಸಿಬಿಯನ್ನು ರದ್ದುಗೊಳಿಸಿ, ಎಲ್ಲ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವರ್ಗಾಯಿಸುವಂತೆ ಮಹತ್ವದ ಆದೇಶ ಹೊರಡಿಸಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಎಸಿಬಿ ಜಾರಿಗೆ ಬಂದಿತ್ತು.
ಇನ್ನು ಮುಂದೆ ಎಸಿಬಿ ಪೊಲೀಸ್ ಠಾಣೆ ಸ್ಥಾನಮಾನ ಇರುವುದಿಲ್ಲ. ಎಲ್ಲ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವರ್ಗಾಯಿಸುವಂತೆ ನ್ಯಾಯಮೂರ್ತಿ ಬಿ.ವೀರಪ್ಪ, ನ್ಯಾ.ಕೆ.ಎಸ್ ಹಂಸಲೇಖಾ ಅವರನ್ನ ಒಳಗೊಂಡ ಪೀಠ ಆದೇಶಿಸಿದೆ.
ಅಲ್ಲದೇ ಲೋಕಾಯುಕ್ತ ಕಾಯ್ದೆಯಲ್ಲಿ ತಿದ್ದುಪಡಿ ಮಾಡುವ ಅಗತ್ಯವಿದೆ. ಲೋಕಾಯುಕ್ತ ಅಧಿಕಾರಿಗಳನ್ನು ಮೂರು ವರ್ಷಗಳ ಅವಧಿಗೆ ನೇಮಕ ಮಾಡಬೇಕು. ಜಾತಿ ಆಧಾರದಲ್ಲಿ ನೇಮಕ ಆಗಬಾರದು ಎಂದಿರು ಹೈಕೋರ್ಟ್, ಭ್ರಷ್ಟಾಚಾರ ಆರೋಪ ಹೊತ್ತವರ ಪಾರಾಗುವ ಸ್ಥಿತಿ ಬರಬಾರದು ಎಂದಿದೆ. ಎಸಿಬಿ ಹಲ್ಲಿಲ್ಲದ ಹಾವು ಎಂದು ರಾಜಕೀಯದವರು, ಸಾರ್ವಜನಿಕರು ಹೇಳುತ್ತಿದ್ದರು. ಹೈಕೋರ್ಟ್ ಆದೇಶದಿಂದ ಲೋಕಾಯುಕ್ತಕ್ಕೆ ಮತ್ತಷ್ಟು ಶಕ್ತಿ ಬಂದಂತಾಗಿದೆ.