ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕರೋನಾ ಸೋಂಕು ಎಲ್ಲೆಡೆ ಹಬ್ಬಿಕೊಳ್ತಿದ್ದು, ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರಿಗೆ ಭೀತಿ ಶುರುವಾಗಿದೆ. ಯಾಕಂದ್ರೆ, ಇವರ ಕಚೇರಿಯ ಮೂವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ವಿಧಾನಸೌಧದಲ್ಲಿರುವ ಆರೋಗ್ಯ ಸಚಿವರ ಕಚೇರಿಯನ್ನ ಸೀಲ್ ಡೌನ್ ಮಾಡಲಾಗಿದೆ.
ಸಚಿವರ ಕಾರು ಚಾಲಕ ಹಾಗೂ ಇಬ್ಬರು ಕಚೇರಿ ಸಿಬ್ಬಂದಿಯಲ್ಲಿ ಸೋಂಕು ದೃಢಪಟ್ಟಿದೆ. ಇಬ್ಬರು ಸಿಬ್ಬಂದಿ ತಮ್ಮೂರಿಗೆ ಹೋಗಿದ್ದು, ಇವರಲ್ಲಿಯೇ ಯಾರೋ ಒಬ್ಬರಿಂದ ಮತ್ತೊಬ್ಬರಿಗೆ ಸೋಂಕು ತಗುಲಿದೆ. ಇದರ ಜೊತೆಗೆ ರಾಜಕೀಯ ಕಾರ್ಯದರ್ಶಿ ಅವರು ಕಚೇರಿ, ಆರೋಗ್ಯ ಸಚಿವರ ಆಫೀಸ್ ಗೆ ಹೊಂದಿಕೊಂಡು ಇರುವುದ್ರಿಂದ, ಅದನ್ನೂ ಸಹ ಸ್ಯಾನ್ ಟೈಸರ್ ಮಾಡಲಾಗಿದೆ.
ಕಚೇರಿ ಸಿಬ್ಬಂದಿಯಲ್ಲಿ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇತರೆ ಸಿಬ್ಬಂದಿಯನ್ನ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಟೆಸ್ಟ್ ಮಾಡಿಸಲಾಗಿದೆ. ಸಧ್ಯ ಸಚಿವರು ಬಳ್ಳಾರಿಯಲ್ಲಿದ್ದು, ಅವರಿಗೂ ಸೋಂಕಿನ ಭೀತಿ ಶುರುವಾಗಿದೆ.