ಪ್ರಜಾಸ್ತ್ರ ಸುದ್ದಿ
ವಿಜಯಪುರ: ಜಿಲ್ಲಾಯಾದ್ಯಂತ ಕೆಲ ದಿನಗಳಿಂದ ಅಕಾಲಿಕ ಮಳೆ ಸುರಿಯುತ್ತಿದೆ. ಇದರ ಪರಿಣಾಮ ಅನೇಕ ಕಡೆ ಸಾಕಷ್ಟು ಅನಾಹುತ ಸಂಭವಿಸಿವೆ. ಇದೆ ರೀತಿ ಸೋಮವಾರ ಸಂಜೆ ಸುರಿದ ಭಾರೀ ಮಳೆಯಿಂದ ಜಿಲ್ಲೆಯ ಕೊಲ್ಹಾರದಲ್ಲಿ ಇಬ್ಬರು ಸಹೋದರರು ಮೃತಪಟ್ಟಿದ್ದಾರೆ.
ತಾಲೂಕಿನ ಚಿರಲದಿನ್ನಿ ಗ್ರಾಮದಲ್ಲಿ ಸಿಡಿಲು ಬಡಿದು ಇಬ್ಬರು ಸಹೋದರರು ಹಾಗೂ 9 ಕುರಿಗಳು ಮೃತಪಟ್ಟಿವೆ. ಬೀರಪ್ಪ ಶಿವಪ್ಪ ಬಡಗೋಳ(20) ಹಾಗೂ ಮಹೇಶ್ ಸತ್ಯಪ್ಪ ಬಡಗೋಳ(14) ಮೃತ ಸಹೋದರರು. ಬಿರುಗಾಳಿ ಸಹಿತಿ ಭಾರೀ ಮಳೆ ಸುರಿದಿದೆ. ಹೀಗಾಗಿ ಸಹೋದರರು ಕುರಿಗಳ ಸಮೇತ ಆಶ್ರಯ ಅರಸಿ ಹೋಗುತ್ತಿದ್ದ ಸಿಡಿಲು ಬಡಿದು ಅನಾಹುತ ಸಂಭವಿಸಿದೆ.