ಪ್ರಜಾಸ್ತ್ರ ಸದ್ದಿ
ಉಡುಪಿ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದ ಲಾಡ್ಜ್ ನಲ್ಲಿ ಮತ್ತೊಬ್ಬ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೊಣಾಜೆಯ ಶರಣ್ ರಾಜ್(31) ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾನೆ.
ಈತ ಮಂಗಳೂರಿನ ಮೆಡಿಕಲ್ ರೆಪ್ ಎಂದು ತಿಳಿದು ಬಂದಿದೆ. ಸಂತೋಷ್ ಆತ್ಮಹತ್ಯೆ ಬಳಿಕ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದ ಲಾಡ್ಜ್ ಹೆಸರನ್ನು ಮಾಲೀಕರು ಬದಲು ಮಾಡಿದ್ದರು. ಆದರೆ, ಇದೀಗ ಅದೆ ಹೋಟೆಲ್ ನಲ್ಲಿ ಮತ್ತೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.