ಸಿಲಿಕಾನ್ ಸಿಟಿಯಲ್ಲಿ 3 ದಿನ ಭರ್ಜರಿ ಮಳೆ

338

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕಳೆದ ಸಂಜೆ ನಗರದಲ್ಲಿ ಸುರಿದ ಭರ್ಜರಿ ಮಳೆಗೆ ಸಿಲಿಕಾನ್ ಸಿಟಿ ಮಂದಿ ಕಂಗಾಲಾಗಿದ್ದಾರೆ. ನಗರದ ದಕ್ಷಿಣ ಭಾಗದಲ್ಲಿ ಭಾರೀ ಮಳೆಯಿಂದಾಗಿ ಕೆಂಗೇರಿ ರಾಜಕಾಲುವೆಯಿಂದ ನೀರು ನುಗ್ಗಿ ಬಂದಿದೆ. ಹೀಗಾಗಿ ಮೈಸೂರು ರಸ್ತೆಗೆ ಹೊಂದಿಕೊಂಡಂತೆ ನಿರ್ಮಿಸಿರುವ ತಡೆಗೋಡೆ 200-300 ಮೀಟರ್ ನಷ್ಟು ಕುಸಿದಿದೆ. ಸಾಕಷ್ಟು ನೀರು ನಿಂತು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈಗ ಮುಂದಿನ ಮೂರು ದಿನಗಳ ಕಾಲ ನಗರದಲ್ಲಿ ಭಾರೀ ಮಳೆಯಾಗಲಿದೆ ಎಂದು ತಿಳಿದು ಬಂದಿದೆ. ಈಗ್ಲೇ ಎಲ್ಲೆಡೆ ಕಾಲುವಂತೆ ನೀರು ಹರಿಯುತ್ತಿದ್ದು, ಮತ್ತೆ 3 ದಿನಗಳ ಕಾಲ ಸುರಿಯುವ ಮಳೆಯಿಂದ ತಪ್ಪಿಸಿಕೊಳ್ಳುವುದು ಹೇಗಪ್ಪ ಅಂತಿದ್ದಾರೆ. ಒಂದ್ಕಡೆ ಕರೋನಾ ರಣಕೇಕೆ, ಇನ್ನೊಂದ್ಕಡೆ ವರುಣನ ಆರ್ಭಟ.

ಸರಿಯಾಗಿ ಪ್ಲಾನ್ ಮಾಡಿದೆ ಸಿಟಿಯನ್ನ ಹಾಳು ಮಾಡಲಾಗ್ತಿದ್ದು, ಇದರ ಪರಿಣಾಮ ಜನರು ಸಮಸ್ಯೆ ಎದುರಿಸುವಂತಾಗಿದೆ. ಹೊರಗಡೆ ಹೋಗುವಾಗ ಜನರು ತಮ್ಮ ಸುರಕ್ಷತೆಯನ್ನ ಕಾಪಾಡಿಕೊಳ್ಳುವುದು ಒಳ್ಳೆಯದು.




Leave a Reply

Your email address will not be published. Required fields are marked *

error: Content is protected !!