ಭಾರಿ ಮಳೆಗೆ ಭೂಕುಸಿತ: 20 ಮಂದಿ ಸಾವು

339

ಪ್ರಜಾಸ್ತ್ರ ಸುದ್ದಿ

ಗುವಾಹಟಿ: ಭರ್ಜರಿಯಾಗಿ ಸುರಿದ ಮಳೆಯಿಂದ ಭೂಕುಸಿತ ಉಂಟಾಗಿದೆ. ಇದರ ಪರಿಣಾಮ 20 ಜನರು ಪ್ರಾಣ ಕಳೆದುಕೊಂಡ ಘಟನೆ ನಡೆದಿದೆ. ದಕ್ಷಿಣ ಆಸ್ಸಾಂನ ಬರಾಕ್ ಕಣಿವೆ ವ್ಯಾಪ್ತಿಯ ಮೂರು ಜಿಲ್ಲೆಗಳಲ್ಲಿ ಭೂಕುಸಿತ ಉಂಟಾಗಿದೆ. ಇದರಲ್ಲಿ 4 ಅಪ್ರಾಪ್ತರು ಸೇರಿ 20 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಹಲವರಿಗೆ ಗಂಭೀರ ಗಾಯಗಳಾಗಿವೆ.

ಕಳೆದೊಂದು ವಾರದಿಂದ ಆಸ್ಸಾಂನಲ್ಲಿ ಭಾರಿ ಮಳೆಯಾಗ್ತಿದೆ. ಇದ್ರಿಂದಾಗಿ ಲಕ್ಷಾಂತರ ಜನರ ಜೀವನ ಅಸ್ತವ್ಯಸ್ತವಾಗಿದೆ. 10 ಸಾವಿರ ಜನರನ್ನ ನಿರಾಶ್ರಿತರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ಲಾಖಿಂಪುರ್, ದಿಬ್ರುಗಡ್, ನಾಲ್ಬರಿ, ಡರ್ಯಾಂಗ್, ಟಿನ್ ಸುಕಿಯಾ, ಗೋಲಾಪಾರ್ ಜಿಲ್ಲೆಗಳಲ್ಲಿನ ಜನರು ತೀವ್ರ ಸಂಕಷ್ಟು ಎದುರಿಸ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!