ಸಿಂದಗಿ: ಪಟ್ಟಣದಲ್ಲಿ ಇಂದು ಸಂಜೆ ಭರ್ಜರಿಯಾಗಿ ಮಳೆ ಸುರಿದ ಪರಿಣಾಮ, ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದ್ವು. ಪಟ್ಟಣದ ತಹಶೀಲ್ದಾರ್ ಕಚೇರಿ ಹತ್ತಿರವಿರುವ ಗಜಾನನ ಬ್ಯಾಂಕ್ ಮತ್ತು ಭವಾನಿ ಹೋಟೆಲ್ ಒಳಗೆ ಚರಂಡಿ ನೀರು ನುಗ್ಗಿ ಸಾಕಷ್ಟು ಹಾನಿಯಾಗಿತ್ತು. ಈ ಬಗ್ಗೆ ಪ್ರಜಾಸ್ತ್ರ ವರದಿ ಮಾಡಿತ್ತು.
ಪ್ರಜಾಸ್ತ್ರ ವರದಿಯಿಂದ ಎಚ್ಚೆತ್ತುಕೊಂಡ ಪುರಸಭೆ ಜೆಸಿಬಿ ಮೂಲಕ ಸಮಸ್ಯೆಯಾಗಿದ್ದ ಗಟಾರ ಸ್ವಚ್ಛ ಮಾಡುವ ಕೆಲಸ ಶುರು ಮಾಡಿದೆ. ಸುಮಾರು 2 ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ ಒಂದಿಷ್ಟು ಚರಂಡಿ ಕೆಲಸ ಮಾಡಿದೆ. ಉಳಿದ ಕೆಲಸವನ್ನ ಶನಿವಾರ ಮಾಡುವುದಾಗಿ ತಿಳಿಸಲಾಗಿದೆ.