ಗಜಾನನ ಸೌಹಾರ್ದ ಬ್ಯಾಂಕಿನಿಂದ ಆಶಾ ಕಾರ್ಯಕರ್ತೆಯರಿಗೆ ಸಹಾಯಧನ

443

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಪಟ್ಟಣದ ತಹಶೀಲ್ದಾರ್ ಕಚೇರಿ ಹತ್ತಿರದ ಗಜಾನನ ಸೌಹಾರ್ದ ಸಹಕಾರಿ ಬ್ಯಾಂಕ್ ವತಿಯಿಂದ, ಆಶಾ ಕಾರ್ಯಕರ್ತೆಯರಿಗೆ ಸಹಾಧನ ನೀಡಿ ಸನ್ಮಾನಿಸಲಾಯ್ತು. ಬ್ಯಾಂಕ್ ಅಧ್ಯಕ್ಷ ಆರ್.ಡಿ ಕುಲಕರ್ಣಿ ಹಾಗೂ ಉಪಾಧ್ಯಕ್ಷ ಸಂಜೀವ ಪೊತದಾರ ಗೌರವಿಸಿ, ಸಹಾಯಧನ ನೀಡಿದ್ರು.

ಬ್ಯಾಂಕಿನ ವ್ಯವಸ್ಥಾಪಕ ಎ.ಸಿ ಜೋಶಿ ನೇತೃತ್ವದಲ್ಲಿ 21 ಆಶಾ ಕಾರ್ಯಕರ್ತರಿಗೆ ತಲಾ 3 ಸಾವಿರ ರೂಪಾಯಿ ಚೆಕ್ ವಿತರಣೆ ಮಾಡಲಾಯ್ತು. ಈ ಮೂಲಕ ಕರೋನಾ ಮಹಾಮಾರಿ ವೈರಾಣು ವಿರುದ್ಧದ ಹೋರಾಟದಲ್ಲಿ ಸೇವೆ ಸಲ್ಲಿಸುತ್ತಿರುವ ಕರೋನಾ ವಾರಿಯರ್ಸ್ ಆದ ಆಶಾ ಕಾರ್ಯಕರ್ತೆಯರಿಗೆ ಗೌರವ ಸಲ್ಲಿಸಲಾಯ್ತು.

ಈ ವೇಳೆ ಎಎನ್ಎಂಆರ್ ಜಿ.ಕೆ ಚಿಕರೆಡ್ಡಿ, ವಿರೇಂದ್ರ ಪವಾಡೆ, ವಿಜಯಪುರದ ಸಹಕಾರಿ ಅಭಿವೃದ್ಧಿ ಅಧಿಕಾರಿ ಎಂ.ಎಸ್ ರಾಠೋಡ, ಸಿಂದಗಿಯ ಸಹಕಾರಿ ಅಭಿವೃದ್ಧಿ ಅಧಿಕಾರಿ ಲೀಲಾವತಿಗೌಡ ಹಾಗೂ ಬ್ಯಾಂಕ್ ಸಿಬ್ಬಂದಿ ಹಾಜರಿದ್ರು.




Leave a Reply

Your email address will not be published. Required fields are marked *

error: Content is protected !!