ಕೋವಿಡ್ 19 ಸಾವು: ಬಳ್ಳಾರಿಯಲ್ಲಿ ಅಮಾನವೀಯ ಅಂತ್ಯಕ್ರಿಯೆ.. ಇಂಥಾ ಸ್ಥಿತಿ ಯಾರಿಗೂ ಬೇಡ..

577

ಪ್ರಜಾಸ್ತ್ರ ಸುದ್ದಿ

ಬಳ್ಳಾರಿ: ನಿನ್ನೆ ಒಂದೇ ದಿನಲ್ಲಿ ಜಿಲ್ಲೆಯಲ್ಲಿ 12 ಕೋವಿಡ್ 19 ಸಾವು ಸಂಭವಿಸಿವೆ. ಹೀಗೆ ಸಾವನ್ನಪ್ಪಿದ್ದವರ ಅಂತ್ಯಕ್ರಿಯೆಯನ್ನ ಕೇಂದ್ರ ಆರೋಗ್ಯ ಇಲಾಖೆ ಮಾರ್ಗಸೂಚಿಯಂತೆ ನಡೆಸಬೇಕು. ಆದ್ರೆ, ಬಳ್ಳಾರಿಯಲ್ಲಿ ಅಮಾನುಷವಾಗಿ ನಡೆಸಲಾಗಿದೆ.

ಸಿಬ್ಬಂದಿ ಮೃತದೇಹಗಳನ್ನ ಎಳೆದುಕೊಂಡು ಬಂದು ಬೃಹತ್ ಗುಂಡಿಯಲ್ಲಿ ಎತ್ತಿ ಎಸೆಯುತ್ತಾರೆ. ಈ ವಿಡಿಯೋ ವೈರಲ್ ಆಗಿದ್ದು, ಆರೋಗ್ಯ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಸೋಂಕು ಬೇರೆಯವರಿಗೆ ಹರಡಬಾರದೆಂದು ತುಂಬಾ ವ್ಯವಸ್ಥಿತವಾಗಿ ಅವರ ಅಂತ್ಯಸಂಸ್ಕಾರ ಮಾಡಬೇಕು. ಆದ್ರೆ, ಇಲ್ಲಿ ಮನುಷ್ಯನ ಸಾವಿಗೆ ಬೆಲೆ ಇಲ್ಲದಾಗಿದೆ.

ಪ್ರಾಣಿಗಳನ್ನ ಎಳೆದು ಬೀಸಾಕುವಂತೆ ಮೃತದೇಹಗಳನ್ನ ಗುಂಡಿಯಲ್ಲಿ ಎಸೆಯಲಾಗುತ್ತೆ. ಅದು ಎರಡೆರಡು ಮೃತದೇಹಗಳನ್ನ ಎಳೆದು ತಂದು ಎಸೆಯುವ ದೃಶ್ಯ ನೋಡಿದ್ರೆ ಎದೆ ಝಲ್ ಎನ್ನುತ್ತೆ. ಮೃತ ಕುಟುಂಬಸ್ಥರು ನೋವು ಎಷ್ಟೊಂದು ಇರಬೇಡ. ಕರೋನಾ ಸೋಂಕಿನಿಂದ ಸತ್ತರೆ ಬೀದಿ ಹೆಣವಾಗಿ ಹೀಗೆ ದಿಕ್ಕಿಲ್ಲದೆ ಮಣ್ಣಾಗುವುದು ನಿಜಕ್ಕೂ ದುರಂತ. ಈ ಸಂಬಂಧ ಜಿಲ್ಲಾ ಆರೋಗ್ಯ ಅಧಿಕಾರಿಗಳು ಸೂಕ್ತ ಕ್ರಮಗಳನ್ನ ತೆಗೆದುಕೊಳ್ಳಬೇಕಿದೆ.




Leave a Reply

Your email address will not be published. Required fields are marked *

error: Content is protected !!