ಹೆಚ್.ಜಿ ಕಾಲೇಜು ವಿದ್ಯಾರ್ಥಿಗಳಿಂದ ಜನ ಜಾಗೃತಿ ರ್ಯಾಲಿ

407

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಜಯಂತಿ ಹಿನ್ನೆಲೆಯಲ್ಲಿ ಪಟ್ಟಣದ ಹೆಚ್.ಜಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ‘ಜನ ಜಾಗೃತಿ ರ್ಯಾಲಿ’ ನಡೆಸಿದರು.

ವಿವೇಕಾನಂದ ಸರ್ಕಲ್ ನಿಂದ ಶುರುವಾದ ರ್ಯಾಲಿ ಬಂದಾಳ ರಸ್ತೆಯ ಮಾರ್ಗವಾಗಿ ಹಾಯ್ದು, ಸಂಗೊಳ್ಳಿ ರಾಯಣ್ಣ ಸರ್ಕಲ್, ಬಸವೇಶ್ವರ ಸರ್ಕಲ್ ಮೂಲಕ ವಾಪಸ್ ಕಾಲೇಜಿಗೆ ಬರಲಾಯಿತು. ಈ ವೇಳೆ ಮದ್ಯಪಾನ ಮುಕ್ತ ಸಮಾಜ ನಿರ್ಮಾಣ ಮಾಡೋಣವೆಂದು ವಿದ್ಯಾರ್ಥಿಗಳು ಘೋಷಣೆ ಕೂಗಿದರು.

ಈ ವೇಳೆ ಕಾಲೇಜಿನ ಪ್ರಾಂಶುಪಾಲರಾದ ಎ.ಆರ್ ಹೆಗ್ಗನದೊಡ್ಡಿ, ಉಪನ್ಯಾಸಕರಾದ ಬಿ.ಎಸ್ ಬಿರಾದಾರ, ರಾಜು ಕಕ್ಕಳಮೇಲಿ, ಹಾಲಪ್ಪ, ಶಾಂತಿ ಬಿರಾದಾರ, ಎ.ಆರ್ ಸಿಂದಗಿಕರ್, ಮುಕ್ತಾಯಕ್ಕ ಕಟ್ಟಿ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.




Leave a Reply

Your email address will not be published. Required fields are marked *

error: Content is protected !!