ಪ್ರಜಾಸ್ತ್ರ ಸುದ್ದಿ
ಸಿಂದಗಿ: ಕೋವಿಡ್ ಮಾರ್ಗಸೂಚಿ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಕಚೇರಿಯಲ್ಲಿ ಅತ್ಯಂತ ಸರಳವಾಗಿ, ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಜಯಂತಿಯನ್ನು ಆಚರಿಸಲಾಯಿತು.
ತಹಶ್ಲೀದಾರ್ ಸಂಜೀವಕುಮಾರ್ ದಾಸರ್ ಫೋಟೋ ಪೂಜೆ ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು, ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ನಮ್ಮ ಖಂಡಿತ ಒಳ್ಳೆ ಫಲ ಕೊಡುತ್ತೆ ಎಂದು ಮಹಾತ್ಮ ಗಾಂಧೀಜಿ ಹೇಳೀದ್ದಾರೆ. ಅದರಂತೆ ನಾವೆಲ್ಲ ಕೆಲಸ ಮಾಡೋಣವೆಂದರು.
ಇನ್ನು ತಾಲೂಕಿನ ವಿಧಾನಸಭೆಗೆ ಉಪ ಚುನಾವಣೆ ನಡೆಯುತ್ತಿದ್ದು, ನಾವು ಉತ್ತಮ ರೀತಿಯ ಕೆಲಸ ಮಾಡೋಣ. ಅದರ ಫಲಿತಾಂಶ ಸಹ ಉತ್ತಮವಾಗಿರುತ್ತೆ ಎಂದು ವಿವಿಧ ಗ್ರಾಮಗಳ ಸೆಕ್ಟರ್ ಅಧಿಕಾರಿಗಳಿಗೆ ಸಲಹೆ ನೀಡಿದರು. ಈ ವೇಳೆ ಶಿರಸ್ತೇದಾರ್ ಸುರೇಶ್ ಮ್ಯಾಗೇರಿ, ಕಂದಾಯ ನಿರೀಕ್ಷಕ ಐ.ಎ.ಮಕಾಂದರ್ ಸೇರಿದಂತೆ ಹಲವರು ಭಾಗವಹಿಸಿದ್ದರು.