ಇಂದು ರಜೆ.. ನಾಳೆ ಬಂದ್.. ಮತ್ತೆ 2 ದಿನ ರಜೆ..

198

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕಾವೇರಿ ನದಿ ನೀರಿನ ವಿಚಾರಕ್ಕೆ ಸಂಬಂಧಿಸಿದಂತೆ ಹೋರಾಟದ ಮೇಲೆ ಹೋರಾಟಗಳು ನಡೆಯುತ್ತಿವೆ. ಹೀಗಾಗಿ ಬಂದ್ ಮೇಲೆ ಬಂದ್ ನಡೆಯುತ್ತಿದ್ದು, ಶುಕ್ರವಾರ ಕರ್ನಾಟಕ ಬಂದ್ ಕರೆ ಕೊಡಲಾಗಿದೆ. ಹೀಗಾಗಿ ನಾಳೆ ಬಹುತೇಕ ಕಡೆ ಖಾಲಿ ಖಾಲಿ ವಾತಾವರಣ ಇರಲಿದೆ.

ಇಂದು ಈದ್ ಮಿಲಾದ್ ಹಬ್ಬದ ಪ್ರಯುಕ್ತ ರಜೆ ಇದೆ. ನಾಳೆ ಕರ್ನಾಟಕ ಬಂದ್, ಶನಿವಾರ ಹಾಗೂ ಭಾನುವಾರ ಐಟಿ ಕಂಪನಿಗಳೆಗೆ ವಾರಂತ್ಯದ ರಜೆ. ಸೋಮವಾರ ಅಕ್ಟೋಬರ್ 2 ಗಾಂಧಿ ಜಯಂತಿ ರಜೆ. ಹೀಗಾಗಿ ಇಂದಿನಿಂದ ಸೋಮವಾರದ ತನಕ ರಜವೋ ರಜ.

ಕೆಲ ಸರ್ಕಾರಿ ನೌಕರರು ಶನಿವಾರ ಒಂದು ರಜೆ ಪಡೆದರೆ ಬರೋಬ್ಬರಿ 5 ದಿನಗಳ ಕಾಲ ಮೋಜು ಮಸ್ತಿ ಮೂಡ್ ನಲ್ಲಿ ಇರುತ್ತಾರೆ. ಆದರೆ, ಇದರ ಎಫೆಕ್ಟ್ ಕೆಲ ವ್ಯಾಪಾರು ವಹಿವಾಟು ಮೇಲಾಗುವುದು ಮಾತ್ರ ಸತ್ಯ. ಕೆಲ ವ್ಯಾಪಾರದಲ್ಲಿ ಭರ್ಜರಿ ಲಾಭ ಮಾಡಿಕೊಳ್ಳಲಾಗುತ್ತೆ. ಒಟ್ಟಿನಲ್ಲಿ ಸಾಲು ಸಾಲು ರಜೆ ಕೆಲವರಿಗೆ ಇಷ್ಟ, ಕೆಲವರಿಗೆ ಕಷ್ಟ.




Leave a Reply

Your email address will not be published. Required fields are marked *

error: Content is protected !!