ಕಾಂಟ್ರವರ್ಸಿ ಮಾತಾಡ್ಬಿಡೋಣ ಚಿನ್ನ ಎಂದ ದರ್ಶನ್

189

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಕಾವೇರಿ ನದಿ ನೀರಿನ ವಿಚಾರವಾಗಿ ರಾಜ್ಯದಲ್ಲಿ ಹೋರಾಟ ಜೋರಾಗುತ್ತಿದೆ. ಕನ್ನಡ ಚಿತ್ರರಂಗದ ಸ್ಟಾರ್ ನಟರೆಲ್ಲ ಸಾಥ್ ನೀಡುತ್ತಿದ್ದಾರೆ. ರೈತ ಸಂಘಟನೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಟ ದರ್ಶನ್ ಮಾತನಾಡಿ, ಮಾರ್ಮಿಕವಾಗಿ ವಾಗ್ದಾಳಿ ನಡೆಸಿದ್ದಾರೆ.

ಮೊದ್ಲು ಕಾಂಟ್ರವರ್ಸಿ ಬಗ್ಗೆ ಮಾತಾಡ್ಬಿಡೋಣ ಚಿನ್ನ ಎಂದು ಹೇಳಿದ ನಟ ದರ್ಶನ್, ಕನ್ನಡ ಕಲಾವಿದರು ಅದಕ್ಕ ಬರಲಿಲ್ಲ, ಇದಕ್ಕ ಬರಲಿಲ್ಲ ಅಂತಾ ಕೇಳ್ತಿರಲ್ಲ. ಮೊನ್ನೆ ಒಂದು ತಮಿಳು ಸಿನಿಮಾ ರಿಲೀಸ್ ಆಯ್ತು. ಅದನ್ನು ಮಿತ್ತನೊಬ್ಬ 6 ಕೋಟಿಗೆ ಖರೀದಿಸಿ 36 ಕೋಟಿ ಲಾಭ ಮಾಡಿದರು. ಆ ಸಿನಿಮಾ ಇಲ್ಲಿ ತಮಿಳಿನವರು ನೋಡಿದ್ರಾ ಸ್ವಾಮಿ? ಕನ್ನಡದವರೇ ನೋಡಿರೋದು. ಈಗ ಬಾರಯ್ಯ ಕಾವೇರಿ ಗಲಾಟೆ ನಡೀತಿದೆ ಅಂತಾ ಆ ನಟರನ್ನು ಕರೆಯಿರಿ. ಎಲ್ಲೋ ಇದ್ದು ಏನೋ ಮಾಡಿದವರಿಗೆ ನೂರಾರು ಕೋಟಿ ಕೊಡ್ತೀರಾ ಯಾಕೆ ನೀವು ಕನ್ನಡ ಸಿನಿಮಾಗೆ ಕೊಡಲ್ಲ ಸ್ವಾಮಿ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ನಿಮಗೆ ಶಿವಣ್ಣ, ಸುದೀಪ್, ದರ್ಶನ್, ಯಶ್ ಮಾತ್ರಾನಾ ಕಾಣಿಸೋದು. ಅವರ್ಯಾರು ಕಾಣ್ತಿಲ್ವಾ? ಹೀಗೆ ಕೇಳುವ ಮೂಲಕ ಕನ್ನಡಿಗರು ಯಾರ ಪರ ನಿಂತುಬೇಕು ಅನ್ನೋದನ್ನು ಸೂಕ್ಷ್ಮವಾಗಿ ಹೇಳಿದ್ದಾರೆ. ಈ ಮೂಲಕ ತಮಿಳು ನಟ, ಕಲಾವಿದರು, ಚಿತ್ರದ ಬಗ್ಗೆ ಆಕ್ರೋಶ ಹೊರ ಹಾಕುವ ಮೂಲಕ ಕಾವೇರಿ ಹೋರಾಟಕ್ಕೆ ನಾವೆಲ್ಲ ಬರುತ್ತೇವೆ. ಕನ್ನಡದ ಕಲಾವಿದರನ್ನು ಬೆಳೆಸಿ. ಅವರ ಚಿತ್ರಗಳನ್ನು ನೋಡಿ ಗೆಲ್ಲಿಸಿ ಎಂದಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.




Leave a Reply

Your email address will not be published. Required fields are marked *

error: Content is protected !!