ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಮಹಿಳೆಯೊಬ್ಬರಿಗೆ ನಟ ದರ್ಶನ್ ಸಾಕು ನಾಯಿ ಕಚ್ಚಿದ ಪ್ರಕರಣ ಸಂಬಂಧ ಇಂದು ಠಾಣೆಗೆ ವಿಚಾರಣೆಗೆ ಹಾಜರಾದರು. ಆರ್.ಆರ್ ನಗರ ಠಾಣೆ ಪೊಲೀಸರು ಮೂರು ದಿನಗಳ ಒಳಗಾಗಿ ಠಾಣೆಗೆ ಬಂದು ವಿಚಾರಣೆಗೆ ಹಾಜರಾಗಬೇಕು ಎಂದು ನೋಟಿಸ್ ನೀಡಿದ್ದರು.
ಮೊದಲ ಬಾರಿಯ ನೋಟಿಸ್ ಗೆ ನಟ ದರ್ಶನ್ ಹಾಜರಾಗಿರಲಿಲ್ಲ. ಹೀಗಾಗಿ 2ನೇ ಬಾರಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಇಂದು ಪೊಲೀಸ್ ಠಾಣೆಗೆ ಬಂದು ವಿಚಾರಣೆ ಎದುರಿಸಿದ್ದಾರೆ.
ಕಳೆದ ಅಕ್ಟೋಬರ್ 28ರಂದು ಖಾಸಗಿ ಆಸ್ಪತ್ರೆ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ದೂರುದಾರೆ ಅಮಿತಾ ಜಿಂದಾಲ್ ಎಂಬುವರು ಬಂದಿದ್ದರು. ಕಾರಿನ ಬಳಿ ಹೋಗುವಾಗ ಮೂರು ನಾಯಿಗಳನ್ನು ಕಂಡು ಭಯದಿಂದ ದೂರ ತೆಗೆದುಕೊಂಡು ಹೋಗು ಎಂದು ದರ್ಶನ್ ಅವರ ಮನೆ ಕೆಲಸದವನಿಗೆ ಹೇಳಿದ್ದಾರೆ. ಆಗ ಆತ ಗಲಾಟೆ ಮಾಡಿದ್ದಾನೆ. ನಾಯಿ ಮೈ ಮೇಲೆ ಎಗರಿ ಹೊಟ್ಟೆ ಭಾಗಕ್ಕೆ ಕಚ್ಚಿದೆ ಎಂದು ದೂರು ನೀಡಿದ್ದಾರೆ.
ಇನ್ನು ಪೊಲೀಸರು ತಮ್ಮ ಪ್ರಕರಣದಲ್ಲಿ ಸರಿಯಾಗಿ ನಡೆದುಕೊಂಡಿಲ್ಲ. ನನಗೆ ನ್ಯಾಯ ಸಿಗದಿದ್ದರೆ ಕೋರ್ಟಿಗೆ ಹೋಗುತ್ತೇನೆ. ನಾನು ಸಹ ವಕೀಲೆ ಇದ್ದೇನೆ. ಮುಂದೆ ಯಾವ ರೀತಿ ನಡೆದುಕೊಳ್ಳಬೇಕು ಎಂಬುವುದು ನನಗೆ ಗೊತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.