ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿರಂಗಕ್ಕೆ ಬಂದು 25 ವರ್ಷಗಳು ತುಂಬಿದ ಪ್ರಯುಕ್ತ, ಬೆಳ್ಳಿ ಪರ್ವ ಡಿ-25 ಕಾರ್ಯಕ್ರಮವನ್ನು ಫೆಬ್ರವರಿ 17ಕ್ಕೆ ಆಯೋಜಿಸಲಾಗಿದೆ. ಫೆಬ್ರವರಿ 16 ದರ್ಶನ್ ಹುಟ್ಟು ಹಬ್ಬ. ಮರುದಿನ ಅವರ 25 ವರ್ಷದ ಸಿನಿ ಪಯಣದ ಕಾರ್ಯಕ್ರಮ ನಡೆಯಲಿದೆ.
ಶ್ರೀರಂಗಪಟ್ಟಣದ ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ಆವರಣದಲ್ಲಿ ಶನಿವಾರ ಸಂಜೆ ಕಾರ್ಯಕ್ರಮ ಆಯೋಜಿಸಲಾಗಿದೆ. ಆದಿಚುಂಚನಗಿರಿ, ಸುತ್ತೂರು ಶ್ರೀಗಳು, ಸಂಸದೆ ಸುಮಲತಾ ಅಂಬರೀಶ್ ಸೇರಿದಂತೆ ಕನ್ನಡ ಚಿತ್ರರಂಗದ ಸ್ಟಾರ್ ನಟ, ನಟಿಯರು, ನಿರ್ದೇಶಕರ, ನಿರ್ಮಾಪಕರ ದಂಡು ಸೇರಲಿದೆ.
ಇದೆ ವೇಳೆ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಸಾರಥ್ಯದಲ್ಲಿ ಸಂಜೆ, ನಟಿಯರಾದ ನಿಮಿಕಾ, ಬೃಂದಾ ಆಚಾರ್ಯ, ನಶ್ವಿಕಾ ನಾಯ್ಡು, ನಮ್ರತಾಗೌಡ, ಶರಣ್ಯ ಶೆಟ್ಟಿ, ಪ್ರಿಯಾಂಕಾ, ತನ್ವಿ ಅವರು ಭರ್ಜರಿ ಸ್ಟೆಪ್ಸ್ ಹಾಕಲಿದ್ದಾರೆ.