ಪ್ರಜಾಸ್ತ್ರ ಸಿನಿಮಾ ಡೆಸ್ಕ್
ನಟ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಈ ಹಿಂದೆ ರಾಬರ್ಟ್ ಮೂವಿ ಮಾಡಿದ್ದರು. ಆಗ ಅವರಿಬ್ಬರ ನಡುವೆ ಒಳ್ಳೆಯ ಸಂಬಂಧವಿತ್ತು. ಆದರೆ, ನಂತರದ ದಿನಗಳಲ್ಲಿ ಏನಾಯ್ತೋ ಗೊತ್ತಿಲ್ಲ ಗಲಾಟೆಗಳು ನಡೆದವು. ಈಗ ಕಾಟೇರ ಸಿನಿಮಾ ವಿಚಾರವಾಗಿ ಇಬ್ಬರ ನಡುವೆ ವಾಕ್ಸಮರ ನಡೆದಿದೆ.
ಕಾಟೇರ ಸಿನಿಮಾದ ಕತೆ ತಾವು ಮಾಡಿಸಿದ್ದು ಎಂದು ನಿರ್ಮಾಪಕ ಉಮಾಪತಿ ಹೇಳಿಕೊಂಡಿದ್ದರು. ಇದೇ ವಿಚಾರವಾಗಿ ನಟ ದರ್ಶನ್, ಚಿತ್ರದ 50ನೇ ದಿನ ಸಂಭ್ರಮಾಚರಣೆಯಲ್ಲಿ ಮಾತನಾಡಿದರು. ಆಗ ಅಯ್ಯೋ ತಗಡೆ ಪ್ರತಿ ಬಾರಿ ಯಾಕೆ ನಮ್ಮಿಂದ ಗುಮ್ಮಿಸಿಕೊಳ್ತೀಯ ಎಂದು ಕಿಡಿ ಕಾರಿದ್ದರು. ಕಾಟೇರ ಕಥೆ ನೀನು ಮಾಡಿಸಿದ್ದಾದರೆ ನೀನೆ ಸಿನಿಮಾ ಯಾಕೆ ಮಾಡಲಿಲ್ಲ. ನಿನ್ನ ಜಡ್ಜ್ ಮೆಂಟ್ ಅಷ್ಟು ಚೆನ್ನಾಗಿದೆಯಲ್ಲ. ಈ ಹಿಂದೆ ಏನೋ ಮಾಡೋಕೆ ಹೋಗಿ ಸಿಕ್ಕಿ ಹಾಕಿಕೊಂಡು ಬೈಸಿಕೊಂಡಿದ್ದಿಯಾ ಅಂತಾ ಆಕ್ರೋಶ ಹೊರ ಹಾಕಿದ್ದಾರೆ.
ನಟ ದರ್ಶನ್ ಮಾತಿಗೆ ನಿರ್ಮಾಪಕ ಉಮಾಪತಿ ಸಹ ಪ್ರತಿಕ್ರಿಯೆ ನೀಡಿ ಅವರು ಟಾಂಗ್ ಕೊಟ್ಟಿದ್ದಾರೆ. ಅಣ್ಣಾವರು ನಿರ್ಮಾಪಕರನ್ನು ಅನ್ನದಾತರು ಎಂದರು. ಈಗಿನವರು ತಗಡು ಅಂತಾರೆ. ಈ ತಗಡು ಕೊಟ್ಟಿದ್ದ ದುಡ್ಡಿನಿಂದ ಅವರ ಕಷ್ಟಗಳು ತೀರಿಸಿಕೊಂಡಿದ್ದಾರೆ ಅಂತೆಲ್ಲ ಮಾತನಾಡಿದ್ದಾರೆ. ಈಗ ನಟ ದರ್ಶನ್ ವಿರುದ್ಧ ಕರ್ನಾಟಕ ಪ್ರಜಾಪರ ವೇದಿಕೆ ಅನ್ನೋ ಸಂಘಟನೆ ಫಿಲ್ಮ್ ಚೇಂಬರ್ ನಲ್ಲಿ ದೂರು ಸಲ್ಲಿಸಿದೆ. ದರ್ಶನ್ ಅವರು ವೇದಿಕೆ ಮೇಲೆ ಬೆದರಿಕೆ ಹಾಕಿದ್ದಾರೆ. ಇದು ಕಾನೂನು ಬಾಹಿರ. ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಹತ್ತಿರ ಕ್ಷಮೆ ಕೇಳಬೇಕು ಎಂದಿದ್ದಾರೆ. ಈ ಮೂಲಕ ಇಡೀ ಪ್ರಕರಣ ದಿನಕ್ಕೊಂದು ಸ್ವರೂಪ ಪಡೆದುಕೊಳ್ಳುತ್ತಿದೆ.