ಪ್ರಜಾಸ್ತ್ರ ಸುದ್ದಿ
ಹುಬ್ಬಳ್ಳಿ: ಕಳೆದ ಸೆಪ್ಟೆಂಬರ್ 19ರಂದು ನಗರದ ನವಲೂರು ಬಳಿಯಲ್ಲಿ ಬಿಆರ್ ಟಿಎಸ್ ಸೇತುವೆ ಕುಸಿತು ಕಂಡು ಆತಂಕ ಮೂಡಿಸಿತ್ತು. ಇದರ ನಡುವೆ ಇದೀಗ ಮತ್ತೊಂದು ಕಡೆ ಸೇತುವೆ ಕುಸಿದಿದೆ. ಇದ್ರಿಂದಾಗಿ ಜನರಲ್ಲಿ ಆತಂಕ ಮೂಡಿದೆ.
ಸತತ ಮಳೆಯಿಂದಾಗಿ ಇತ್ತೀಚೆಗಷ್ಟೇ ನಿರ್ಮಿಸಿದ ಸೇತುವೆ ತಡಗೋಡೆಯ ಪ್ಯಾನಲ್ ಗಳು ಕಳಿಚಿ ಬೀಳುತ್ತಿವೆ. 15ಕ್ಕೂ ಹೆಚ್ಚು ಪ್ಯಾನಲ್ ಗಳು ಹಾಗೂ ಮಣ್ಣು ಕುಸಿದು ಬಿದ್ದಿದೆ. ಹೀಗಾಗಿ ಸರ್ವಿಸ್ ರಸ್ತೆಯಲ್ಲಿ ಸಂಚರಿಸಲು ಸ್ಥಳೀಯರು ಭಯ ಪಡುತ್ತಿದ್ದಾರೆ. ಹೀಗೆ ಎರಡು ಭಾಗದಲ್ಲಿ ಸೇತುವೆ ಕುಸಿದಿದೆ ಅಂದ್ರೆ, ಕಾಮಗಾರಿ ಎಷ್ಟೊಂದು ಕಳಪೆಯಾಗಿದೆ ಅನ್ನೋದಕ್ಕೆ ಸಾಕ್ಷಿಯಾಗಿದೆ.
ಇದೆ ರೀತಿ ಇನ್ನೂ ಹಲವು ಕಡೆ ಪ್ಯಾನಲ್ ಗಳು ಕುಸಿಯುವ ಸಾಧ್ಯತೆಯಿದೆ. ಕೂಡಲೇ ಸ್ಥಳೀಯ ಶಾಸಕರು, ಈ ಭಾಗದ ಸಚಿವರು ಎಚ್ಚೆತ್ತುಕೊಂಡು ಸಮಸ್ಯೆಯ ಗಂಭೀರತೆ ಅರಿತುಕೊಂಡು ಜನರ ಜೀವ ಕಾಪಾಡಬೇಕಿದೆ. ಇಲ್ಲದೆ ಹೋದ್ರೆ ಮುಂದೆ ದೊಡ್ಡ ಅನಾಹುತವಾಗಬಹುದು.