ಪ್ರಜಾಸ್ತ್ರ ಸುದ್ದಿ
ಹುಬ್ಬಳ್ಳಿ: ಇಲ್ಲಿನ ಚೆನ್ನಮ್ಮ ಸರ್ಕಲ್ ಹತ್ತಿರದ ಈದ್ಗಾ ಮೈದಾನದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ ಗಣೇಶನನ್ನು ಇಂದು ಮಧ್ಯಾಹ್ನ ವಿಸರ್ಜನೆ ಮಾಡಲಾಗಿದೆ. ಷರತ್ತಿನಂತೆ ಸೆಪ್ಟೆಂಬರ್ 2ರ ಮಧ್ಯಾಹ್ನ 12ಗಂಟೆಯ ತನಕ ಅವಕಾಶ ಕಲ್ಪಿಸಲಾಗಿತ್ತು.
ಇಂದು ಮುಂಜಾನೆ 11.145ರ ಸುಮಾರಿಗೆ ಆರ್ ಎಸ್ಎಸ್ ನ ಅಖಿಲ ಭಾರತ ವ್ಯವಸ್ಥಾ ಪ್ರಮುಖ ಮಂಗೇಶ ಭೆಂಡೆ, ಪ್ರಾಂತ ಕಾರ್ಯಕಾರಿಣಿ ಸದ್ಯಸ ಶ್ರೀಧರ ನಾಡಗೇರ ಸೇರಿದಂತೆ ಅನೇಕರು ವಿಶೇಷ ಪೂಜೆ ಸಲ್ಲಿಸಿ, ವಿಸರ್ಜನೆ ಮೆರವಣಿಗೆ ನಡೆಸಿದರು.
ಅತ್ತ ಗಣೇಶ ವಿಸರ್ಜನೆ ಮೆರವಣಿಗೆ ಈದ್ಗಾ ಮೈದಾನದಿಂದ ಹೊರಡುತ್ತಿದ್ದಂತೆ, ಪಾಲಿಕೆ ಸಿಬ್ಬಂದಿ ಪೆಂಡಾಲ್ ತೆರವು ಕಾರ್ಯ ನಡೆಸಿತು. 30ಕ್ಕೂ ಹೆಚ್ಚು ಸಿಬ್ಬಂದಿ ಪೆಂಡಾಲ್ ತೆರವುಗೊಳಿಸಿದರು.