ಪ್ರಜಾಸ್ತ್ರ ಸುದ್ದಿ
ಮಂಗಳೂರು: ಪತಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡರೆ ಪತ್ನಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕದ್ರಿ ಹತ್ತಿರದ ಪಿಂಟೋಸ್ ಲೇನ್ ನಲ್ಲಿ ಬುಧವಾರ ಸಂಭವಿಸಿದೆ.
ಸುರೇಶ(62) ಹಾಗೂ ವಾಣಿ(55) ಆತ್ಮಹತ್ಯೆ ಮಾಡಿಕೊಂಡು ದಂಪತಿಯಾಗಿದ್ದಾರೆ. ಈ ದಂಪತಿ ಮೇಲಿನ ಮಹಡಿಯಲ್ಲಿ ವಾಸವಾಗುತ್ತಿದ್ದರು. ಕುಟುಂಬದ ಇತರೆ ಸದಸ್ಯರು ಕೆಳಗಿನ ಮನೆಯಲ್ಲಿ ವಾಸವಾಗಿದ್ರು. ಚಿಟ್ ಫಂಡ್ ನಷ್ಟದಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಡೆತ್ ನೋಟ್ ನಲ್ಲಿ ತಿಳಿಸಿದ್ದಾರೆ. ಕದ್ರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸ್ತಿದ್ದಾರೆ.