ಸಚಿವನಾಗಬೇಕೆಂಬ ಆಸೆ ನನಗೂ ಇದೆ: ಶಾಸಕ ರಾಯರೆಡ್ಡಿ

105

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಇತ್ತೀಚೆಗೆ ರಾಜ್ಯ ಸರ್ಕಾರದ ವಿರುದ್ಧ ಸ್ವಪಕ್ಷೀಯ ಶಾಸಕ ಬಸವರಾಜ ರಾಯರೆಡ್ಡಿ ಅವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಸಚಿವರು ಮಾತು ಕೇಳುತ್ತಿಲ್ಲವೆಂದು ಶಾಸಕರ ಪಡೆಯೊಂದಿಗೆ ಸಿಎಂಗೆ ಪತ್ರ ಬರೆದಿದ್ದರು. ಕಾರ್ಯಕ್ರಮದಲ್ಲಿ ಅಸಮಾಧಾನ ಹೊರ ಹಾಕಿದ್ದರು. ಈಗ ನನಗೂ ಸಚಿವನಾಗಬೇಕೆಂಬ ಆಸೆ ಇದೆ. ನಾನೇನು ಸನ್ಯಾಸಿ ಅಲ್ಲ ಎಂದಿದ್ದಾರೆ.

ಅಧಿಕಾರ ಬಿಟ್ಟುಕೊಡಲು ನಾನೇನು ಸಂತನಲ್ಲ. ಸಚಿವ ಸಂಪುಟದಲ್ಲಿ ನನಗೂ ಇರಬೇಕೆಂಬ ಆಸೆ. ಸಚಿವ ಸಂಪುಟದಲ್ಲಿ ಸೇರ್ಪಡೆಯಾಗದೆ ಇರುವುದಿಲ್ಲ ಏನು ಕಾರಣ ಎಂದು ನನಗೆ ಗೊತ್ತಿಲ್ಲ. ಆದ್ರೆ, ಸಚಿವ ಸ್ಥಾನಕ್ಕಾಗಿ ನಾನು ಪತ್ರ ಬರೆದಿದ್ದೇನೆ ಎನ್ನುವುದು ಸರಿಯಲ್ಲ. ಸಿದ್ದರಾಮಯ್ಯನವರೊಂದಿಗೆ ಮೊದಲಿನಿಂದಲೂ ಉತ್ತಮ ಬಾಂಧವ್ಯ ಹೊಂದಿದ್ದೇನೆ ಎಂದರು.




Leave a Reply

Your email address will not be published. Required fields are marked *

error: Content is protected !!