ಪ್ರಜಾಸ್ತ್ರ ಸುದ್ದಿ
ತಮಿಳುನಾಡು: ಭಾರತ್ ಜೋಡೋ ಯಾತ್ರೆಯನ್ನು ಕಾಂಗ್ರೆಸ್ ಹಮ್ಮಿಕೊಂಡಿದೆ. ಯಾತ್ರೆ ಆರಂಭಕ್ಕೂ ಮೊದಲು ಸಂಸದ ರಾಹುಲ್ ಗಾಂಧಿ, ಶ್ರೀಪೆರಂಬದೂರಿನಲ್ಲಿರುವ ರಾಜೀವ್ ಗಾಂಧಿ ಅವರ ಸ್ಮಾರಕಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದರು.
ಇದಾದ ಬಳಿಕ ಟ್ವೀಟ್ ಮಾಡಿರುವ ಅವರು, ದ್ವೇಷ ರಾಜಕಾರಣ ಹಾಗೂ ವಿಭಜನೆಗಾಗಿ ತಂದೆಯನ್ನು ಕಳೆದುಕೊಂಡೆ. ಆದರೆ, ದೇಶವನ್ನು ಕಳೆದುಕೊಳ್ಳುವುದಿಲ್ಲವೆಂದು ಭಾವನಾತ್ಮಕವಾಗಿ ಬರೆದಿದ್ದಾರೆ. ಪ್ರೀತಿ ದ್ವೇಷವನ್ನು ಗೆಲ್ಲುತ್ತದೆ. ನಾವೆಲ್ಲ ಒಟ್ಟಾಗಿ ಜಯಸೋಣ. ಸಮಸ್ಯೆಗಳಿಂದ ಹೊರ ಬರೋಣ ಎಂದು ಬರೆದಿದ್ದಾರೆ.
ನಾಳೆ ಬೆಳಗ್ಗೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಯಾತ್ರೆ ನಡೆಯಲಿದೆ. ಒಟ್ಟು 3,500 ಕಿಲೋ ಮೀಟರ್ ಯಾತ್ರೆ ಇದಾಗಿದೆ. 119 ಯಾತ್ರೆಯ ಮೆರವಣಿಗೆಗಳು ಇದರಲ್ಲಿ ಇರಲಿವೆ. ಇದೆ ರೀತಿ ಪ್ರತಿ ರಾಜ್ಯದಲ್ಲಿ ಭಾರತ ಜೋಡಿಸುವ ಯಾತ್ರೆ ನಡೆಯಲಿದೆ.