ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ತೀವ್ರ ಏರುಗತಿಯಲ್ಲಿದೆ. ಶುಕ್ರವಾರ 48 ಸಾವಿರಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿವೆ. ಕೋವಿಡ್ ರೋಗಿಗಳಿಗೆ ರೆಮಡಿಸಿವರ್ ಇಂಜಕ್ಷನ್ ತುಂಬಾ ಮುಖ್ಯವಾಗಿದೆ. ಆದ್ರೆ, ಇದರ ಕೊರತೆ ಎಲ್ಲೆಡೆ ಕಂಡು ಬರ್ತಿದೆ. ಇದನ್ನೇ ಕೆಲವರು ದಂಧೆ ಮಾಡಿಕೊಂಡಿದ್ದಾರೆ.
ರೆಮಡಿಸಿವರ್ ಇಂಜಿಕ್ಷನ್ ಕಾಳಸಂತೆಯಲ್ಲಿ 30, 40 ಸಾವಿರಕ್ಕೆ ಮಾರಾಟ ಮಾಡಲಾಗ್ತಿದೆ. ಅಕ್ರಮವಾಗಿ ಮಾರಾಟ ಮಾಡುವ ಮೂಲಕ ಜನರಿಂದ ಸುಲಿಗೆ ನಡೆಸಲಾಗ್ತಿದ್ದು, ಅಂತವರು ಕಂಡು ಬಂದ್ರೆ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ನಗರದ ಅಟಲ್ ಬಿಹಾರ ವಾಜಪೇಯಿ ವೈದ್ಯಕೀಯ ಕಾಲೇಜಿನಲ್ಲಿ 3ನೇ ಹಂತದ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದ್ರು. 3 ಲಕ್ಷ ಲಸಿಕೆಯನ್ನ ಕೇಂದ್ರ ಕಳುಹಿಸಿದೆ. ರಾಜ್ಯದಲ್ಲಿ 1 ಲಕ್ಷ ಲಸಿಕೆ ಇದೆ. 18 ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯಬಹುದು ಎಂದರು.