ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕರೋನಾ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಹೀಗಾಗಿ ರಾಜ್ಯದಲ್ಲಿ ರೆಮ್ ಡಿಸಿವರ್ ಅಭಾವ ಸಾಕಷ್ಟು ಕಾಡಿದೆ. ಕರೋನಾ ಸೋಂಕಿತರು ಇದ್ರಿಂದ ಸಾಕಷ್ಟು ನೋವು ಅನುಭವಿಸಿದ್ದು, ದಂಧೆಕೋರರು ಕಾಳಸಂತೆಯಲ್ಲಿ ಮಾರಿ ಭರ್ಜರಿ ದುಡ್ಡು ಮಾಡಿಕೊಂಡಿದ್ದಾರೆ.
ರೆಮ್ ಡಿಸಿವರ್ ಅಕ್ರಮ ಮಾರಾಟಕ್ಕೆ ಬ್ರೇಕ್ ಹಾಕಲು ಹೊಸ ವ್ಯವಸ್ಥೆಯೊಂದು ಮಾಡಲಾಗಿದೆ. https://covidwar.karnataka.gov.in/service2 ಈ ಲಿಂಕ ಮೂಲಕ ಯಾವ ರೋಗಿಗೆ ರೆಮ್ ಡಿಸಿವರ್ ಹಂಚಿಕೆಯಾಗಿದೆ. ಅವರಿಗೆ ತಲುಪಿದ್ಯಾ ಅನ್ನೋದು ತಿಳಿದುಕೊಳ್ಳಬಹುದು. ಅವರ ಫೋನ್ ಗೆ ಒಂದು ಮೆಸೇಜ್ ಬರುತ್ತೆ. ಆ ಮೂಲಕ ಈ ಲಿಂಕ್ ಮೂಲಕ ಮಾಹಿತಿ ಪಡೆಯಬಹುದಾಗಿದೆ.
ಈ ಬಗ್ಗೆ ಆರೋಗ್ಯ ಸಚಿವ ಡಾ.ಕೆ ಸುಧಾಕರ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ. ಹಂಚಿಕೆಯಾದ ವ್ಯಕ್ತಿಗೆ ರೆಮ್ ಡಿಸಿವರ್ ಸಿಗದೆ ಹೋದ್ರೆ ಇದೆ ಲಿಂಕ್ ಮೂಲಕ ದೂರು ದಾಖಲಿಸಬಹುದು.