ಪ್ರಜಾಸ್ತ್ರ ಸುದ್ದಿ
ರಾಯಪುರ: ಕರೋನಾ ಲಾಕ್ ಡೌನ್ ಉಲ್ಲಂಘಿಸಿದ ಯುವಕನೊಬ್ಬನ ಕಪಾಳಕ್ಕೆ ಹೊಡೆದು ಆತನ ಮೊಬೈಲ್ ನ್ನ ಜಿಲ್ಲಾಧಿಕಾರಿ ಒಡೆದು ಹಾಕಿರುವ ಘಟನೆ ನಡೆದಿದೆ. ಛತ್ತೀಸಗಢದ ಸೂರಜಪುರದಲ್ಲಿ ಈ ಘಟನೆ ನಡೆದಿದೆ.
ಜಿಲ್ಲಾಧಿಕಾರಿ ರಣಬೀರ ಶರ್ಮಾ, ಸಾಹಿಲ್ ಗುಪ್ತಾ ಅನ್ನೋ ಯುವಕನ ಮೊಬೈಲ್ ಒಡೆದು, ಕೆನ್ನೆಗೆ ಹೊಡೆದಿದ್ದಾರೆ. ಇದು ಭಾರೀ ವೈರಲ್ ಆಗಿದ್ದು, ಜಿಲ್ಲಾಧಿಕಾರಿಯನ್ನ ವರ್ಗಾವಣೆ ಮಾಡಿ ಸಿಎಂ ಆದೇಶಿಸಿದ್ದಾರೆ. ಛತ್ತೀಸಗಢ ಮುಖ್ಯಮಂತ್ರಿ ಭೂಪೇಶ ಬಘೀಲ್, ತಕ್ಷಣದಿಂದ ಜಿಲ್ಲಾಧಿಕಾರಿಯನ್ನ ಕೆಲಸದಿಂದ ತೆಗೆದು ಹಾಕುವಂತೆ ಸೂಚಿಸಿದ್ದಾರೆ.