ಪ್ರಜಾಸ್ತ್ರ ಅಪರಾಧ ಸುದ್ದಿ
ಸರಗೂರು: ತಾಯಿ, ಹೆಂಡ್ತಿ ಹಾಗೂ ಇಬ್ಬರು ಮಕ್ಕಳನ್ನ ಹತ್ಯೆ ಮಾಡಿದ್ದ ಹಂತಕ ಮಣಿಕಂಠಸ್ವಾಮಿ(35) ಎಂಬಾತನನ್ನ ಪೊಲೀಸರು ಬಂಧಿಸಿದ್ದಾರೆ. ಪತ್ನಿ ಗಂಗಾ ಮೇಲಿನ ಅನುಮಾನವೇ ಕೊಲೆಗೆ ಕಾರಣವೆಂದು ತಿಳಿದು ಬಂದಿದೆ.
ತಾಯಿ ಕೆಂಪಾಜಮ್ಮ, ಗರ್ಭಿಣಿ ಪತ್ನಿ, ಇಬ್ಬರು ಪುಟ್ಟ ಮಕ್ಕಳನ್ನ ಬುಧವಾರ ರಾತ್ರಿ ಮಲಗಿದಾಗ ಕಬ್ಬಿಣದ ಕೋಲಿನಿಂದ ತೆಲೆಗೆ ಹೊಡೆದು ಹತ್ಯೆ ಮಾಡಿದ್ದ. 3ನೇ ಮಗುವಿನ ನಿರೀಕ್ಷೆಯಲ್ಲಿದ್ದ ಗಂಗಾಳನ್ನ ಗುರುವಾರ ಆಸ್ಪತ್ರೆಗೆ ದಾಖಲಿಸಬೇಕಿತ್ತು. ಆದ್ರೆ, ಪಾಪಿ ಮಣಿಕಂಠಸ್ವಾಮಿ ಕುಡಿದು ಬಂದು ಹೇಯ ಕೆಲಸ ಮಾಡಿದ್ದ.