ಮಂಡ್ಯ: ಅಕ್ರಮವಾಗಿ ಸಾಗಾಟ ಮಾಡ್ತಿದ್ದ ಕರುಗಳನ್ನ ರಕ್ಷಣೆ ಮಾಡಲಾಗಿದೆ. ಕೆ.ಆರ್.ಪೇಟೆ ತಾಲೂಕಿನ ಗ್ರಾಮಾಂತರ ಠಾಣೆ ಪೊಲೀಸರು ಶನಿವಾರ ಮಧ್ಯರಾತ್ರಿ ಹತ್ತಾರು ಕರುಗಳನ್ನ ತುಂಬಿಕೊಂಡು ಅಕ್ರಮವಾಗಿ ಸಾಗಿಸ್ತಿದ್ದ ಟಿಂಪೋವನ್ನ ವಶಕ್ಕೆ ಪಡೆಯಲಾಗಿದೆ.
ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ರಂಗನಾಥಪುರ ಗ್ರಾಮದ ರಸ್ತೆಯಲ್ಲಿ ಅತಿ ವೇಗವಾಗಿ ಸಾಗುತ್ತಿದ್ದ ಕೆಎ 18 ಸಿ 1235 ಸಂಖ್ಯೆಯ ವಾಹನವನ್ನ ತಡೆದು ಪರಿಶೀಲನೆ ನಡೆಸಿದಾಗ, ವಾಹನದಲ್ಲಿ ಕುರುಗಳು ಇರುವುದು ಕಂಡು ಬಂದಿದೆ.
ಈ ವೇಳೆ ಹಸುವಿನಿಂದ ಬಳಲುತ್ತಿದ್ದ ಕುರುಗಳಿಗೆ ಪಟ್ಟಣದ ಹಾಲಿನ ಡೈರಿಗಳಿಂದ ಹಾಲು ತರಿಸಿ ಮಧ್ಯಾರಾತ್ರಿಯೇ ಅವುಗಳಿಗೆ ಹಾಲೂಣಿಸಿದ ಪೊಲೀಸ್ರು ಮಾನವೀಯತೆ ತೋರಿಸಿದ್ದಾರೆ. ಅಕ್ರಮವಾಗಿ ಕರುಗಳನ್ನ ಸಾಗಾಟ ಮಾಡ್ತಿದ್ದವರನ್ನ ವಶಕ್ಕೆ ಪಡೆಯಲಾಗಿದೆ.