ಇಂದಿರಾಗೆ ಭೂಗತ ಜಗತ್ತಿನ ನಂಟು: ರಾವತ್

390

ಮುಂಬೈ: ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಗೆ ಭೂಗತ ಜಗತ್ತಿನ ನಂಟು ಇತ್ತು ಎಂದು ಶಿವಸೇನೆ ಮುಖಂಡ ಸಂಜಯ ರಾವತ್ ಹೇಳಿದ್ದು ಹೊಸ ವಿವಾದ ಕ್ರಿಯೇಟ್ ಮಾಡಿದೆ. ಇಂದಿರಾ ಗಾಂಧಿ ಭೂಗತ ದೊರೆ ಕರೀಂ ಲಾಲನನ್ನು ಭೇಟಿಯಾಗ್ತಿದ್ರು ಅಂತಾ ನೀಡಿದ್ದ ಹೇಳಿಕೆ ಹೊಸ ಅಲೆ ಎಬ್ಬಿಸಿದೆ.

ಮುಂಬೈ ಪೊಲೀಸ್ ಆಯುಕ್ತರು ಯಾರಾಗಬೇಕು? ಮಹಾರಾಷ್ಟ್ರದ ವಿಧಾನಸೌಧದಲ್ಲಿ ಯಾರು ಕುಳಿತುಕೊಳ್ಳಬೇಕು ಅನ್ನೋದು ಭೂಗತ ದೊರೆಗಳು ನಿರ್ಧಾರಿಸುವ ಕಾಲವಿತ್ತು ಅಂತಾ ಹೇಳಿಕೆ ನೀಡಿದ್ದಾರೆ. ದಾವೂದ ಇಬ್ರಾಹಿಂ, ಶೋಟಾ ಶಕೀಲಾ, ಶರದ ಶೆಟ್ಟಿ ಅವರ ಕಾಲವೊಂದಿತ್ತು. ಕರಿಂ ಲಾಲನನ್ನು ಇಂದಿರಾ ಗಾಂಧಿ ಭೇಟಿಯಾಗ್ತಿದ್ರು. ನಾವು ಭೂಗತ ಲೋಕ ನೋಡಿದ್ದೇವೆ. ಈಗ ಇದು ಸಣ್ಣ ವಿಷ್ಯ ಎಂದು ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ಸಂಜಯ ರಾವತ್ ಹೇಳಿಕೆ ವಿವಾದ ಹುಟ್ಟು ಹಾಕ್ತಿದ್ದಂತೆ ತಮ್ಮ ಮಾತನ್ನ ಹಿಂದಕ್ಕೆ ಪಡೆಯುವುದಾಗಿ ಹೇಳಿದ್ದಾರೆ. ಕಾಂಗ್ರೆಸ್ ಈ ಬಗ್ಗೆ ಪ್ರತಿಭಟನೆ ನಡೆಸಿತು. ಇಂದಿರಾ ಗಾಂಧಿ ಬಗ್ಗೆ ನನ್ಗೆ ಗೌರವವಿದೆ. ಕರಿಂ ಲಾಲ, ಪಠಾಣ ಸಮುದಾಯದ ಮುಖಂಡ. ಸಮುದಾಯದ ಮುಖಂಡನ ದೃಷ್ಟಿಯಿಂದ ಅವರನ್ನ ಭೇಟಿಯಾಗ್ತಿದ್ರು. ನನ್ನ ಮಾತನ್ನ ತಿರುಚಲಾಗಿದೆ. ನನ್ನ ಹೇಳಿಕೆಯಿಂದ ಇಂದಿರಾ ಗಾಂಧಿ ಅವರ ಗೌರವಕ್ಕೆ ಧಕ್ಕೆಯಾಗಿದೆ ಎಂದು ನಮ್ಮ ಮಿತ್ರ ಪಕ್ಷ ಕಾಂಗ್ರೆಸ್ ಹೇಳ್ತಿದ್ರೆ ನನ್ನ ಹೇಳಿಕೆಯನ್ನ ಹಿಂದಕ್ಕೆ ತೆಗೆದುಕೊಳ್ಳುತ್ತೇನೆ ಅಂತಾ ಟ್ವೀಟ್ ಮಾಡಿ ಕಾಂಗ್ರೆಸ್ ನಾಯಕರಿಗೆ ಟ್ಯಾಗ್ ಮಾಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!