ಅಂತ್ಯ ಸಂಸ್ಕಾರಕ್ಕೆ 20 ಜನ ಸೇರಬಾರದು.. ಮದ್ಯದಂಗಡಿ ಮುಂದೆ ಸಾವಿರ ಮಂದಿ ನಿಲ್ಲಬಹುದು..

505

ಮುಂಬೈ: ಮದ್ಯ ಮಾರಾಟ ಮರು ಪ್ರಾರಂಭ ಮಾಡಿರುವುದ್ರಿಂದ ಪರ ವಿರೋಧ ಚರ್ಚೆಗಳು ನಡೆದಿವೆ. ಇದಕ್ಕೆ ಶಿವಸೇನೆ ಲೀಡರ್ ಸಂಜಯ ರಾವತ್, ಕೇಂದ್ರದ ವಿರುದ್ಧ ಕಿಡಿ ಕಾರಿದ್ದಾರೆ.

ಅಂತ್ಯ ಸಂಸ್ಕಾರಕ್ಕೆ 20 ಜನ ಸೇರಬಾರದು. ಆದ್ರೆ, ಮದ್ಯದಂಗಡಿ ಮುಂದೆ ಸಾವಿರಾರು ಮಂದಿ ಕ್ಯೂ ನಿಲ್ಲಬಹುದು. ಇದ್ಯಾವ ನಿಯಮವೆಂದು ಲೌಕ್ ಡೌನ್ ಸಡಿಲಿಕೆ ವಿರುದ್ಧ ಟ್ವೀಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸತ್ತ ವ್ಯಕ್ತಿಯಲ್ಲಿ ಶಕ್ತಿ ಹೋಗಿರುತ್ತೆ. ಮದ್ಯದ ಅಂಗಡಿಯಲ್ಲಿ ಶಕ್ತಿ ಇರುವುದ್ರಿಂದ ಸಾವಿರಾರು ಜನ ಸೇರಲು ಅನುಮತಿ ನೀಡಲಾಗಿದೆ ಎಂದು ಕಾಲೆಳೆದಿದ್ದಾರೆ.

ವೈಜ್ಞಾನಿಕವಾಗಿ ಸತ್ತ ವ್ಯಕ್ತಿಯ ದೇಹದಲ್ಲಿ ಯಾವುದೇ ರೀತಿಯ ವೈರಾಣುಗಳು ಬದುಕುಳಿಯುವುದಿಲ್ಲವೆಂದು ಹೇಳ್ತಾರೆ. ಆದ್ರೆ, ಕೆಲವೊಮ್ಮ ನಮ್ಮ ಸರ್ಕಾರಗಳ ವಿಚಿತ್ರ ನಿಲುವುಗಳು ಹತ್ತು ಹಲವು ಪ್ರಶ್ನೆಗಳನ್ನ ಹುಟ್ಟು ಹಾಕುವುದು ಸತ್ಯ.




Leave a Reply

Your email address will not be published. Required fields are marked *

error: Content is protected !!