ಪ್ರಜಾಸ್ತ್ರ ಸುದ್ದಿ
ಸಿಂದಗಿ: ಕರೋನಾ ಲಾಕ್ ಡೌನ್ ನಿಂದಾಗಿ ಹೊರ ರಾಜ್ಯಗಳಿಂದ ತಾಲೂಕಿಗೆ ಬಂದವರನ್ನ ಸಂಸ್ಥಾ ಕ್ವಾರಂಟೈನ್ ಮಾಡಲಾಗ್ತಿದೆ. ಇದಕ್ಕಾಗಿ ಸರ್ಕಾರಿ ಶಾಲೆ, ವಸತಿ ನಿಲಯ ಬಳಸಿಕೊಳ್ಳಲಾಗ್ತಿದೆ. ಅದೇ ರೀತಿ ಪಟ್ಟಣದಲ್ಲಿರುವ ವಸತಿ ನಿಲಯಗಳನ್ನ ಬಳಸಿಕೊಳ್ಳಲಾಗಿದೆ. ಹೀಗೆ ಸಂಸ್ಥಾ ಕ್ವಾರಂಟೈನ್ ನಲ್ಲಿರುವವರಿಗೆ ಊಟದ ವ್ಯವಸ್ಥೆ ಮಾಡಲಾಗಿರುತ್ತೆ. ಆದ್ರೆ, ಇಂದು ಊಟದ ವಿಚಾರಕ್ಕೆ ಅಡುಗೆ ಕೆಲಸದವನ ಮೇಲೆ ಹಲ್ಲೆ ನಡೆದಿದೆ.
ಮೈಬೂಬಸಾಬ ಇಮಾಮಸಾಬ ಬನ್ನೆಟ್ಟಿ ಅನ್ನೋ 60 ವರ್ಷದ ಅಡುಗೆ ಕೆಲಸದವನ ಮೇಲೆ ಇಬ್ಬರು ಯುವಕರು ಹಲ್ಲೆ ಮಾಡಿದ್ದು, ಈ ಸಂಬಂಧ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೇವರನಾವದಗಿಯ ಅರುಣ ರಾಠೋಡ ಹಾಗೂ ರಾಹುಲ ರಾಠೋಡ ಅನ್ನೋ ಇಬ್ಬರು ಯುವಕರು, ನಮ್ಗೆ ಮೊದಲು ಊಟ ಕೊಡು. ಸರತಿ ಸಾಲಿನಲ್ಲಿ ನಿಲ್ಲು ಎಂದು ನಮ್ಗೆ ಹೇಳ್ತೀಯಾ ಎಂದು ಜಗಳ ಮಾಡಿ, ಸಿಮೆಂಟ್ ಇಟ್ಟಿಗೆಯಿಂದ ಹಲ್ಲೆ ಮಾಡಿದ್ದಾರೆಂದು ಪ್ರಕರಣ ದಾಖಲಾಗಿದೆ. ಗಾಯಗೊಂಡಿರುವ ಮೈಬೂಬಸಾಬನ್ನ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.