ನವದೆಹಲಿ: ಐಎನ್ಎಕ್ಸ್ ಮೀಡಿಯಾ ಹಗರಣದ ಆರೋಪಿ ಮಾಜಿ ವಿತ್ ಸಚಿವ ಪಿ.ಚಿದಂಬರಂ ಅವರನ್ನ ಸೆಪ್ಟಂಬರ್ 2ರವರೆಗೂ ಸಿಬಿಐ ಕಸ್ಟಡಿಯಲ್ಲಿರುವ ಕೋರ್ಟ್ ಆದೇಶ ನೀಡಿದೆ.
ಆಗಸ್ಟ್ 21ರಂದ ಸಿಬಿಐನಿಂದ ಬಂಧನಕ್ಕೆ ಒಳಗಾಗಿದ್ದ ಚಿದಂಬರಂ ಆಗಸ್ಟ್ 30ರ ತನಕ ಸಿಬಿಐ ಕಸ್ಟಡಿ ವಿಧಿಸಿತ್ತು. ಅದು ಮುಗಿದು ಇಂದು ಕೋರ್ಟ್ ಗೆ ಹಾಜರು ಪಡಿಸಲಾಗಿತ್ತು. ದೆಹಲಿ ಕೋರ್ಟ್ ಸೆಪ್ಟಂಬರ್ 2ರ ತನಕ ಸಿಬಿಐ ಕಸ್ಟಡಿಯಲ್ಲಿ ಮುಂದುವರೆಯಲು ಆದೇಶಿಸಿದೆ.
ವಿಚಾರಣೆಗೂ ಮೊದ್ಲು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ ಚಿದಂಬರಂ ಪರ ವಕೀಲರು, ಸೆಪ್ಟಂಬರ್ 2ರ ತನಕ ಸಿಬಿಐ ಕಸ್ಟಡಿಯಲ್ಲಿ ಇರ್ಲಿ ಎಂದು ಕೇಳಿಕೊಂಡಿದ್ರು. ಇನ್ನು ನಿರೀಕ್ಷಣಾ ಜಾಮೀನು ನಿರಾಕರಿಸಿರುವುದನ್ನ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನ ಸೆಪ್ಟಂಬರ್ 2ರಂದು ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.