ಪ್ರಜಾಸ್ತ್ರ ಸುದ್ದಿ
ಚಿತ್ರದುರ್ಗ: ಚಳ್ಳಕೆರೆ ತಾಲೂಕಿನ ಪರಶುರಾಂಪುರ ಪೊಲೀಸ್ ಠಾಣೆಯಲ್ಲಿ ಐಪಿಎಲ್ ಬೆಟ್ಟಿಂಗ್ ಕಿಂಗ್ ಪಿನ್, ಜೂಜಾಟ ಕೇಸಿನಲ್ಲಿ ಬಂಧಿತನಾಗಿರುವ ಆರೋಪಿಗೆ ಸನ್ಮಾನ ಮಾಡಲಾಗಿದೆ. ಪಿಎಸ್ಐ ಸ್ವಾತಿ ಹಾಗೂ ಸಿಬ್ಬಂದಿ ದಸರಾ ಹಬ್ಬದ ಹಿನ್ನೆಲೆಯಲ್ಲಿ ಸನ್ಮಾನ ಮಾಡಿದ್ದಾರೆ.
ಆರೋಪಿ ತಮ್ಮಣ್ಣ, ತಳಕು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜೂಜಾಟ, ಐಪಿಎಲ್ ಬೆಟ್ಟಿಂಗ್ ಸೇರಿದಂತೆ ಇತರೆ ಪ್ರಕರಣಗಳಲ್ಲಿ ಬಂಧಿತನಾಗಿದ್ದಾನೆ. ಇಂತಹ ವ್ಯಕ್ತಿಗೆ ಪಿಎಸ್ಐ ಸೇರಿಯೇ ಸನ್ಮಾನಿಸಿದ್ದು, ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.
ಅಪರಾಧಿಗಳು, ಅಪರಾಧ ಹಿನ್ನೆಲೆ ಹೊಂದಿರುವವರು ಸೇರಿದಂತೆ ಇತರರೊಂದಿಗೆ ಯಾವುದೇ ರೀತಿಯಲ್ಲಿ ಗುರುತಿಸಿಕೊಳ್ಳದಂತೆ ಸರ್ಕಾರ ಎಚ್ಚರಿಕೆ ನೀಡಿದೆ. ಠಾಣೆಯಲ್ಲಿ ಯಾರಿಂದಲೂ ಸನ್ಮಾನ ಮಾಡಿಸಿಕೊಳ್ಳಬಾರದು, ಮಾಡಬಾರದು ಎಂದಿದೆ. ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಭಾಗವಹಿಸುವ ಸಂಬಂಧ ಸಹ ಕೆಲ ನಿಬಂಧನಗಳನ್ನು ವಿಧಿಸಿದೆ. ಆದ್ರೆ, ಇಲ್ಲಿ ಆರೋಪಿಯನ್ನೇ ಸನ್ಮಾನಿಸಿರುವುದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.