ನವದೆಹಲಿ: ಜಮ್ಮು-ಕಾಶ್ಮೀರ ಮಾಜಿ ಸಿಎಂ ಮಹೆಬೂಬಾ ಮುಫ್ತಿ ಅವರನ್ನ ಗೃಹ ಬಂಧನದಲ್ಲಿ ಇಟ್ಟುರುವುದಕ್ಕೆ ಅವರ ಪುತ್ರಿ ಇಲ್ಟಿಜಾ ಜಾವೇದ, ಗೃಹ ಸಚಿವ ಅಮಿತ ಶಾ ಅವರಿಗೆ ಪತ್ರ ಬರೆದಿದ್ದಾರೆ. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಹಿಂಪಡೆದಿರುವುದಕ್ಕೆ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ನಾಯಕಿ ಪುತ್ರಿ ಪ್ರಶ್ನಿಸಿದ್ದಾರೆ.
ಇಂದು ದೇಶದ ಉಳಿದ ಭಾಗಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸ್ತಿದ್ರೆ, ಕಾಶ್ಮೀರಿಗಳನ್ನ ಪ್ರಾಣಿಗಳಂತೆ ಕೂಡಿ ಹಾಕಲಾಗಿದೆ ಅಂತಾ ಹೇಳಿದ್ದಾರೆ. ನನ್ನನ್ನು ಸಹ ಭೇಟಿ ಮಾಡುಲು ಯಾರಿಗೂ ಅವಕಾಶವಿಲ್ಲ. ನಾನು ಯಾವುದೇ ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಂಡಿಲ್ಲದಿದ್ರೂ ಹೀಗೇಕೆ ಮಾಡ್ತಿದ್ದೀರಿ ಅಂತಾ ಪ್ರಶ್ನಿಸಿದ್ದಾರೆ.