ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಆದಾಯ ತೆರಿಗೆ ವಂಚನೆ ಸಂಬಂಧ ಸಿಲಿಕಾನ್ ಸಿಟಿಯ 15 ಕಡೆ ಐಟಿ ಅಧಿಕಾರಿಗಳು ಇಂದು ಮುಂಜಾನೆ ದಾಳಿ ನಡೆಸಿದ್ದು, ಪರಿಶೀಲನೆ ನಡೆಸಲಾಗುತ್ತಿದೆ. ಉದ್ಯಮಿಗಳ ನಿವಾಸಗಳ ಮೇಲೆ ದಾಳಿ ನಡೆಸಲಾಗಿದೆ.
ದೆಹಲಿ, ಚೆನ್ನೈನಿಂದ ಬಂದ ನಗರದ ಸದಾಶಿವನಗರ, ವಿಜಯನಗರ, ಸ್ಯಾಂಕಿ ಟ್ಯಾಂಕಿ ಏರಿಯಾ ಸೇರಿದಂತೆ 15 ಕಡೆ ದಾಳಿ ನಡೆಸಲಾಗಿದೆ. ಇದರಲ್ಲಿ ಚಿನ್ನದ ವ್ಯಾಪಾರಿಗಳು, ಖಾಸಗಿ ಕಂಪನಿ ಮಾಲೀಕರು, ಉದ್ಯಮಿಗಳು ಇದ್ದಾರೆ.