ಮೈಸೂರು: ನವರಾತ್ರಿ ಹಬ್ಬದ ಸಂಭ್ರಮದಲ್ಲಿ ಪ್ರತಿಯೊಬ್ಬರೂ ಮುಳುಗಿದ್ದು, ವಿಶ್ವವಿಖ್ಯಾತ ಜಂಬೂಸವಾರಿಗೆ ಇನ್ನೆರಡು ದಿನ ಬಾಕಿ ಉಳಿದಿದೆ. ವಿಜಯದಶಮಿಯೆಂದು ನಡೆಯುವ ಜಂಬೂ ಸವಾರಿಗೆ ಅರಮನೆ ನಗರಿ ಶೃಂಗಾರಗೊಂಡಿದ್ದು ಇಂದು ಗಜಪಡೆಗಳ ತಾಲೀಮು ನಡೆಸಲಾಯ್ತು.
ಅಂಬಾರಿ ಹೊರುವ ಅರ್ಜುನ, ಬಲರಾಮ, ಅಭಿಮನ್ಯು ಆನೆ ಸೇರಿದಂತೆ ಇತರೆ ಆನೆಗಳು ಹೇಗೆ ಸಾಗಬೇಕು ಅನ್ನೋದರ ರಿಹರ್ಸಲ್ ನಡೆಯಿತು. ನಗರ ಪೊಲೀಸ್ ಆಯುಕ್ತ ಕೆ.ಟಿ ಬಾಲಕೃಷ್ಣ, ಕಾನೂನು ಹಾಗೂ ಸುವ್ಯವಸ್ಥೆ ವಿಭಾಗದ ಡಿಸಿಪಿ ಮುತ್ತುರಾಜ, ನಗರ ಸಶಸ್ತ್ರ ಮೀಸಲು ಪಡೆಯ ಡಿಸಿಪಿ ಚೆನ್ನಯ್ಯ ಅಂಬಾರಿ ಹೊರುವ ಅರ್ಜುನ ಆನೆಗೆ ಪುಷ್ಪಾರ್ಚನೆ ಮಾಡಿದ್ರು.
ಗಜಪಡೆ ಜೊತೆ ಅಶ್ವರೋಹಿ ದಳ, ನಗರ ಮೀಸಲು ಪಡೆ, ರಾಜ್ಯ ಮೀಸಲು ಪಡೆ ಸೇರಿದಂತೆ 10 ಪೊಲೀಸ್ ತುಕುಡಿಗಳು ತಾಲೀಮು ನಡೆಸಿದ್ವು. ಈ ವೇಳೆ 21 ಕುಶಾಲತೋಪುಗಳನ್ನ ಸಿಡಿಸಲಾಯ್ತು.