ವೋಟಿಂಗ್ ವೇಳೆ ಗಲಾಟೆ: ಗುಂಡಿನ ದಾಳಿಯಲ್ಲಿ ಓರ್ವ ಬಲಿ

393

ಜಾರ್ಖಂಡ್: ಸಿಸಾಯ್ ಮತಕ್ಷೇತ್ರದಲ್ಲಿ ನಡೆದ ಗುಂಪು ಗಲಾಟೆ ವೇಳೆ ಗುಂಡಿನ ಸದ್ದು ಕೇಳಿದೆ. ಅಷ್ಟು ಮಾತ್ರವಲ್ಲ ಓರ್ವ ಬಲಿಯಾಗಿದ್ದಾನೆ. ಭದ್ರತಾ ಸಿಬ್ಬಂದಿ ಮೇಲೆ ಗುಂಪೊಂದು ಕಲ್ಲು ತೂರಾಟ ನಡೆಸಿತು. ಈ ವೇಳೆ ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ಬಲಿಯಾಗಿದ್ದು, ಇನ್ನೊಬ್ಬನಿಗೆ ಗಾಯಗಳಾಗಿವೆ.

ಕಲ್ಲು ತೂರಾಟ ಘಟನೆಯಲ್ಲಿ ಇಬ್ಬರು ಕಾನ್ಸ್ ಟೇಬಲ್, ಪತ್ರಕರ್ತ ಸೇರಿದಂತೆ 8 ಮಂದಿ ಗಾಯಗೊಂಡಿದ್ದಾರೆ. ಗುಮ್ಲಾ ಜಿಲ್ಲೆಯ ಬದ್ನಿ ಗ್ರಾಮದ ಬೂತ್ ನಂಬರ್36ರಲ್ಲಿ ಈ ಒಂದು ಘಟನೆ ನಡೆದಿದೆ. ಗಾಯಗೊಂಡವರನ್ನ ರಾಂಚಿ ಆಸ್ಪತ್ರೆಗೆ ಸಾಗಿಸಲಾಗಿದೆ. ಸದ್ಯ ಮತದಾನ ನಿಲ್ಲಿಸಿದ್ದು ಮರು ಮತದಾನ ದಿನಾಂಕ ಘೋಷಣೆ ಮಾಡಲಾಗುವುದು ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!