ತಮ್ಮ ವಿರುದ್ಧದ ಆರೋಪಗಳಿಗೆ ಅನಿರುದ್ಧ್ ಸ್ಪಷ್ಟನೆ

188

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಜೊತೆ ಜೊತೆಯಲಿ ಸೀರಿಯಲ್ ನಟ ಅನಿರುದ್ಧ್ ಹಾಗೂ ನಿರ್ದೇಶಕ, ನಿರ್ಮಾಪಕರ ನಡುವಿನ ಜಗಳದ ಕುರಿತು ಸಾಕಷ್ಟು ಚರ್ಚೆಯಾಗುತ್ತಿದೆ. ನಟ ಅನಿರುದ್ಧ್ ಅವರನ್ನು 2 ವರ್ಷ ಕಿರುತೆರೆಯಿಂದ ನಿರ್ಬಂಧಿಸಲಾಗಿದೆ. ಈ ಗಲಾಟೆಯ ಕುರಿತು ನಟ ಅನಿರುದ್ಧ್ ಸ್ಪಷ್ಟನೆ ನೀಡಿದ್ದಾರೆ.

ಸ್ಕ್ರಿಪ್ಟ್ ವಿಚಾರವಾಗಿ ಕೋಪಗೊಂಡಿದ್ದು ನಿಜ. ನಾನು ಗೆಲ್ಲಬೇಕಾಗಿಲ್ಲ. ಪ್ರಾಜೆಕ್ಟ್ ಗೆಲ್ಲಬೇಕು. ಕೊನೆ ಗಳಿಗೆಯಲ್ಲಿ ಸ್ಕ್ರಿಪ್ಟ್ ಕೊಟ್ಟಿದ್ದಾರೆ. ಆಗ ನಿರ್ದೇಶಕರಿಗೆ ಬೈದಿದ್ದು ನಿಜ. ಆದರೆ, ಮೂರ್ಖ ಎಂದಿಲ್ಲ. ನಾವೆಲ್ಲ ಯಾವತ್ತೂ ಮೂರ್ಖತನದ ಕೆಲಸ ಮಾಡಬಾರದು ಎಂದಿದ್ದೇನೆ. ನಿರ್ದೇಶಕ ಮಧು ಉತ್ತಮ್ ಅವರಿಗೆ ನೋವಾಗಿದ್ದರೆ ಕ್ಷಮಿಸಿ. ನಿಮಗೆ ಒಳ್ಳೆಯದಾಗಬೇಕು ಅನ್ನೋದು ನನ್ನ ಹಾರೈಕೆ ಎಂದು ಮಾಧ್ಯಮಗೋಷ್ಠಿಯ ಮೂಲಕ ತಿಳಿಸಿದ್ದಾರೆ.

ಕ್ಯಾರಾವಾನ್ ಬೇಕು ಎನ್ನಲು ಹಲವು ಕಾರಣಗಳಿವೆ. ಹೊರಗಡೆ ಶೂಟಿಂಗ್ ಗೆ ಹೋದಾಗ ಕಲಾವಿದರಿಗೆ ವಾಶ್ ರೂಂಗೆ ಹೋಗಲು ತೊಂದರೆ ಆಗುತಿತ್ತು. ಬೆಟ್ಟಕ್ಕೆ ಹೋಗಲು, ಇನ್ಯಾರದೋ ಮನೆಗೆ ಹೋಗಲು ಆಗುತ್ತಿರಲಿಲ್ಲ. ಹೀಗಾಗಿ ಕ್ಯಾರಾವಾನ್ ಬೇಕು ಎಂದಿದ್ದೆ. ಆನಂತರ ಬಂತು. ಈ ಬಗ್ಗೆ ಮಹಿಳಾ ಕಲಾವಿದರು ಅನುಕೂಲವಾಯಿತು ಎಂದು ಹೇಳಿದರುಹಗಲು, ರಾತ್ರಿ ಕೆಲಸ ಮಾಡಿದ್ದೇನೆ. ಮನೆಯಿಂದಲೇ ಊಟ, ತಿಂಡಿ ತೆಗೆದುಕೊಂಡು ಹೋಗುತ್ತಿದ್ದೆ. . ಕಲಾವಿದನಿಗೆ ಬೇರೆ ಬೇರೆ ಆಯಾಮಗಳು ಇರುತ್ತವೆ. ಶೂಟಿಂಗ್ ನಲ್ಲಿ ಪ್ರತಿ ಬಾರಿ ಒತ್ತಡ ಇರಬಾರದು. ಅನಿವಾರ್ಯ ಇದ್ದಾಗ ಮುಗಿಸಿಕೊಂಡು ಹೋಗುತ್ತೇವೆ.

ಒತ್ತಡದಲ್ಲಿ ಕೆಲಸ ಮಾಡಿಸುವುದು, ಭಯ ಹುಟ್ಟಿಸುವುದು, ಎಲ್ಲರ ಮೇಲೆ ಟೆನ್ಷನ್ ಮಾಡಿಕೊಳ್ಳುವುದು ಸರಿಯಲ್ಲ. ಆರಾಮವಾಗಿ ಕೆಲಸ ಮಾಡಿಸಿಕೊಂಡು ಹೋಗಬೇಕು ಎಂದು ಸಾಕಷ್ಟು ಸಾರಿ ಹೇಳಿದ್ದೇನೆ. ನಿನ್ನೆಯಿಂದ ತುಂಬಾ ಸ್ಟ್ರೆಸ್ ನಲ್ಲಿದ್ದೆ. ಹೀಗಾಗಿ ಈ ಬಗ್ಗೆ ಮಾತನಾಡಲು ಆಗಿರಲಿಲ್ಲ. ಇದರ ಬಗ್ಗೆ ಸ್ಪಷ್ಟನೆ ಕೊಡಬೇಕಿತ್ತು. ಇಂದು ಇಷ್ಟೊಂದು ವಿಚಾರವನ್ನು ಹಂಚಿಕೊಂಡಿದ್ದೇನೆ ಎಂದು ನಟ ಅನಿರುದ್ಧ್ ತಿಳಿಸಿದರು.




Leave a Reply

Your email address will not be published. Required fields are marked *

error: Content is protected !!