ಅನಿರುದ್ಧ್ ಮತ್ತೆ ಕಿರುತೆರೆಗೆ.. ನಿರ್ಮಾಪಕರ ಸಂಘ ಹೇಳಿದ್ದೇನು?

210

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಜೊತೆ ಜೊತೆಯಲಿ ಧಾರವಾಹಿ ಸೆಟ್ ನಲ್ಲಿ ನಡೆದ ವಿಚಾರಕ್ಕೆ ಸಂಬಂಧಿಸಿದಂತೆ ನಟ ಅನಿರುದ್ಧ್ ಅವರನ್ನು ಆರ್ಯವರ್ಧನ್ ಪಾತ್ರದಿಂದ ಕೈ ಬಿಡಲಾಯಿತು. ಸ್ಮಾಲ್ ಸ್ಕ್ರೀನ್ ದುನಿಯಾದಲ್ಲಿ ಹೊಸಮೈಲುಗಲ್ಲು ಸಾಧಿಸಿದ ಸೀರಿಯಲ್ ನಿಂದ ಅನಿರುದ್ಧ್ ಹೊರ ಬಂದರು. ಅಲ್ಲದೆ 2 ವರ್ಷಗಳ ಕಾಲ ಚಲನಚಿತ್ರ ಕ್ಷೇತ್ರದ ಯಾವುದೇ ಕಾರ್ಯಗಳಲ್ಲಿ ಅವರ ತೊಡಗಿಸಿಕೊಳ್ಳದಂತೆ ನಿರ್ಮಾಪಕರ ಸಂಘ ತೀರ್ಮಾನಿಸಿತ್ತು.

ಈಗ ಹಿರಿಯ ನಿರ್ದೇಶಕ, ನಟ ಎಸ್.ನಾರಾಯಣ್ ಅವರು ಆಕ್ಷನ್ ಕಟ್ ಹೇಳುತ್ತಿರುವ ಸೂರ್ಯವಂಶ ಸೀರಿಯಲ್ ನಲ್ಲಿ ನಟ ಅನಿರುದ್ಧ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಅವರೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ನಾನು ಯಾವುದೇ ಕಾರ್ಯಕ್ರಮದಲ್ಲಿ ಕೆಲಸ ಮಾಡುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ನಟ ಅನಿರುದ್ಧ್ ಹೇಳಿದ್ದಾರೆ.

ಇನ್ನೊಂದು ಕಡೆ ಕಿರುತರೆ ನಿರ್ಮಾಪಕರ ಸಂಘದ ಅಧ್ಯಕ್ಷ ಭಾಸ್ಕರ್ ಅವರು ಮಾತನಾಡಿ, ಇದೇ ವಿಚಾರವಾಗಿ ಸಭೆ ನಡೆಯಲಿದೆ. ಸಭೆಯಲ್ಲಿ ಯಾವೆಲ್ಲ ವಿಚಾರ ಚರ್ಚೆಯಾಗುತ್ತದೆ ಅನ್ನೋದನ್ನು ಹೇಳುತ್ತೇನೆ ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!