ಡಾ.ವಿಷ್ಣುವರ್ಧನವರ ಕಾಲರ್ ಹಿಡಿಯೋ ಧೈರ್ಯ ಯಾರಿಗಿದೆ?

280

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸ್ಯಾಂಡಲ್ ವುಡ್ ಸಾಹಸಿಂಹ ಡಾ.ವಿಷ್ಣುವರ್ಧನ ಕುರಿತು, ತೆಲುಗು ನಟನೆಂದು ಹೇಳಿಕೊಳ್ಳುತ್ತಿರುವ ವಿಜಯ ರಂಗರಾಜು ಎಂಬಾತ, ಯೂಟ್ಯೂಬ್ ಚಾನೆಲ್ ವೊಂದರ ಜೊತೆ ಮಾತ್ನಾಡಿದ್ದು, ಆಗ ವಿಷ್ಣು ಬಗ್ಗೆ ಕೆಟ್ಟದಾಗಿ ಮಾತ್ನಾಡಿದ್ದಾನೆ. ಹೆಣ್ಮಕ್ಕಳ ವಿಕ್ನೆಸ್ ಇತ್ತು. ಅವರ ಕಾಲರ್ ಹಿಡಿದು ಹೊಡೆಯಲು ಹೋಗಿದ್ದೆ ಎಂದೆಲ್ಲ ಹೇಳಿದ್ದಾನೆ.

ಈಗಾಗ್ಲೇ ಸೋಷಿಯಲ್ ಮೀಡಿಯಾದಲ್ಲಿ ಆತನ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ವಿಷ್ಣು ಸೇನಾ ಸಂಘದಿಂದ ದೂರು ಸಹ ನೀಡಲಾಗಿದೆ. ಕನ್ನಡದ ನಟರು ಸಹ ಇದೀಗ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ವಿಷ್ಣುವರ್ಧನವರ ಅಳಿಯ, ನಟ ಅನಿರುದ್ಧ ಸಹ ಕಿಡಿ ಕಾರಿದ್ದು, ಡಾ.ವಿಷ್ಣುವರ್ಧನರ ಕಾಲರ್ ಹಿಡಿಯೋ ತಾಕತ್ತು ಯಾರಿಗಿದೆ ಎಂದಿದ್ದಾರೆ.

ಇನ್ನು ಇಡೀ ಕನ್ನಡ ನಾಡಿನ ಜನತೆಯ ಕ್ಷಮೆ ಕೇಳಬೇಕು ಎಂದಿರುವ ನಟ ಅನಿರುದ್ಧ, ಕರ್ನಾಟಕಕ್ಕೆ ಎಂದೂ ಬರಬೇಡಿ. ಬಂದ್ರೆ ಏನಾಗುತ್ತೆ ಗೊತ್ತಿಲ್ಲವೆಂದು ವಾರ್ನಿಂಗ್ ಮಾಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!