ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಜೊತೆ ಜೊತೆಯಲಿ ಧಾರವಾಹಿಯಿಂದ ನಟ ಅನಿರುದ್ಧ್ ಹೊರ ಬಂದ ಮೇಲೆ, ಆರ್ಯವರ್ಧನ್ ಪಾತ್ರಕ್ಕೆ ಯಾರು ಅನ್ನೋ ಪ್ರಶ್ನೆ ಜನರಲ್ಲಿದೆ. ಇದೀಗ ಓಡಾಡುತ್ತಿರುವ ಮಾಹಿತಿ ಪ್ರಕಾರ ನಿರ್ದೇಶಕ ಅನೂಪ್ ಭಂಡಾರಿ ಆರ್ಯವರ್ಧನ್ ಪಾತ್ರಕ್ಕೆ ಬರ್ತಾರಂತೆ.
ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಮಾಹಿತಿ ಹರಿದಾಡುತ್ತಿದೆ. ಅನೂಪ್ ಭಂಡಾರಿ ಧಾರವಾಹಿಯಲ್ಲಿ ನಟಿಸುವ ಕುರಿತು, ಸೀರಿಯಲ್ ತಂಡವಾಗಲಿ, ನಿರ್ದೇಶಕ ಅನೂಪ್ ಆಗಲಿ ಹೇಳಿಲ್ಲ. ರಂಗಿತರಂಗ, ವಿಕ್ರಾಂತ್ ರೋಣಾ ಸಕ್ಸಸ್ ನಲ್ಲಿದ್ದು, ಇನ್ನು ಕೆಲವು ಚಿತ್ರಗಳ ತಯಾರಿಯಲ್ಲಿದ್ದಾರೆ. ಇದೆಲ್ಲ ಬಿಟ್ಟು ಆರ್ಯವರ್ಧನ್ ಪಾತ್ರದ ಮೇಲೆಯೇ ಕೇಂದ್ರಿಕೃತವಾಗಿರುವ ಸೀರಿಯಲ್ ನಲ್ಲಿ ನಟಿಸುತ್ತಾರಾ ಅನ್ನೋ ಕುತೂಹಲ ಇದೆ.