ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಕನ್ನಡದ ಸ್ಮಾಲ್ ಸ್ಕ್ರೀನ್ ನಲ್ಲಿ ಹೊಸ ರೆಕಾರ್ಡ್ ಮಾಡಿದ ಜೊತೆ ಜೊತೆಯಲಿ ಸೀರಿಯಲ್ ನಿಂದ ನಟ ಅನಿರುದ್ಧ್ ಹೊರ ಬಂದಿದ್ದಾರೆ. ಹೀಗಾಗಿ ಆ ಜಾಗಕ್ಕೆ ಹೊಸ ನಟರ ಹುಡುಕಾಟ ನಡೆದಿದೆ. ಇದರಲ್ಲಿ ನಿರ್ದೇಶಕ ಅನೂಪ್ ಭಂಡಾರಿ ಹೆಸರು ಕೇಳಿ ಬಂದಿತ್ತು. ಅವರ ಸಿನಿಮಾ ಕೆಲಸದ ನಡುವೆ ಆಗಲ್ಲ ಅಂದಿದ್ದಾರೆ.
ಜೆಕೆ ಖ್ಯಾತಿಯ ಜೈರಾಮ್, ವಿಜಯ್ ರಾಘವೇಂದ್ರ, ಹರೀಶ್ ರಾಜ್ ಹೆಸರು ಕೇಳಿ ಬಂದಿವೆ. ಈ ಬಗ್ಗೆ ಹರೀಶ್ ರಾಜ್ ಸಹ ತಮಗೆ ಆಫರ್ ಬಂದಿದ್ದು, ನಿಜ ಆದರೆ ನನ್ನದೊಂದು ಷರತ್ತು ಇದೆ ಎಂದು ಹೇಳಿದ್ದಾರಂತೆ.
ಧಾರವಾಹಿಗಳ ಜೊತೆಯಲ್ಲಿ ಸಿನಿಮಾಗಳಲ್ಲಿಯೂ ಬ್ಯುಸಿ ಇರುವ ಹರೀಶ್ ರಾಜ್ ಚಿತ್ರರಂಗದಲ್ಲಿ 25 ವರ್ಷಗಳನ್ನು ಪೂರೈಸಿದ್ದಾರೆ. ಅವರದೊಂದ ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗಿದೆ. ಇನ್ನು ಶುರುವಾಗಬೇಕಿದೆ. ಹೀಗಾಗಿ, ತಿಂಗಳಲ್ಲಿ 15 ದಿನ ಸೀರಿಯಲ್, 15 ದಿನ ತಮ್ಮ ಸಿನಿಮಾಗಳ ಇತರೆ ಕಾರ್ಯಗಳಿಗೆ ಸಮಯಬೇಕು ಎಂದಿದ್ದಾರೆ. ಹೀಗಾಗಿ ಅಂತಿಮವಾಗಿ ಸರೀಯಲ್ ತಂಡದ ಮೇಲೆ ಅಂತಿಮ ನಿರ್ಧಾರ ನಿಂತಿದೆ ಎಂದಿದ್ದಾರೆ.