ರಾಜ್ಯ ಸರ್ಕಾರದಿಂದ ಮತ್ತೆ ಯಡವಟ್ಟು: ನಿನ್ನೆ ಆದೇಶ.. ಇಂದು ಹಿಂದಕ್ಕೆ..

160

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯ ಸರ್ಕಾರ ಕೆಲವೊಂದು ವಿಚಾರಗಳಲ್ಲಿ ಮತ್ತೆ ಮತ್ತೆ ಯಡವಟ್ಟು ಮಾಡಿಕೊಂಡು ಅಪಹಾಸ್ಯಕ್ಕೆ, ಜನರ ಆಕ್ರೋಶಕ್ಕೆ ಗುರಿಯಾಗುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಡಿಯಲ್ಲಿನ 21 ಟ್ರಸ್ಟ್, ಪ್ರತಿಷ್ಠಾನಗಳಿಗೆ ನೂತನವಾಗಿ ಅಧ್ಯಕ್ಷರು, ಸದಸ್ಯರನ್ನು ನೇಮಕ ಮಾಡಿ ಬುಧವಾರ ಆದೇಶ ಹೊರಡಿಸಿತ್ತು. ಇಂದು ಆದೇಶ ಹಿಂದಕ್ಕೆ ಪಡೆದಿದೆ.

ಪೂರ್ಣಚಂದ್ರ ತೇಜಸ್ವಿ ಅವರ ಪ್ರತಿಷ್ಠಾನಕ್ಕೆ ನೇಮಕ ಮಾಡಿದ ನೂತನ ಸದಸ್ಯರಲ್ಲಿ ತೇಜಸ್ವಿ ಅವರ ಪತ್ನಿ ರಾಜೇಶ್ವರಿ ಅವರ ಹೆಸರು ಸಹ ಅನುಮೋದಿಸಲಾಗಿದೆ. ಆದರೆ, ಅವರು ಕಳೆದ ಡಿಸೆಂಬರ್ 14, 2021ರಲ್ಲಿ ಅವರು ನಿಧನರಾಗಿದ್ದಾರೆ. ಈ ಯಡವಟ್ಟಿಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಜೊತೆಗೆ ನರೇಂದ್ರ ದೇರ್ಲ ಅವರು ಅಧ್ಯಕ್ಷ ಸ್ಥಾನವನ್ನು ನಿರಾಕರಿಸಿದ್ದಾರೆ. ವೈಯಕ್ತಿಕ ಕಾರಣಗಳಿಗೆ ಅಧ್ಯಕ್ಷ ಸ್ಥಾನ ನಿರಾಕರಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!