ಪ್ರಜಾಸ್ತ್ರ ಸುದ್ದಿ
ಸಿಂದಗಿ: ಅಕಾಲಿಕವಾಗಿ ಸೋಮವಾರ ಮುಂಜಾನೆ ನಿಧನ ಹೊಂದಿದ ಹಿರಿಯ ಪತ್ರಕರ್ತರು, ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕರಾಗಿದ್ದ ಗುರುಲಿಂಗಸ್ವಾಮಿ ಹೊಳಿಮಠ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕಿನ ಪತ್ರಕರ್ತರು ಕೂಡಿಕೊಂಡು ಒಂದು ನಿಮಿಷ ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಕಾನಿಪ ತಾಲೂಕಾಧ್ಯಕ್ಷ ಆನಂದ ಶಾಬಾದಿ, ಅಗಲಿದ ಹಿರಿಯ ಪತ್ರಕರ್ತ ಗುರುಲಿಂಗಸ್ವಾಮಿ ಹೊಳಿಮಠ ನಿಧನ ತುಂಬಾ ನೋವಿನ ಸಂಗತಿ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಆ ಭಗವಂತ ನೀಡಲಿ ಎಂದರು.
ಈ ವೇಳೆ ಪ್ರಜಾಸ್ತ್ರ ವೆಬ್ ಪತ್ರಿಕೆ ಸಂಪಾದಕ ನಾಗೇಶ ತಳವಾರ, ಕಾನಿಪ ಉಪಾಧ್ಯಕ್ಷ ಮಲ್ಲಿಕಾರ್ಜುನ ಅಲ್ಲಾಪೂರ, ಖಜಾಂಚಿ ವಿಜು ಪತ್ತಾರ, ಬಿಜೆಪಿ ತಾಲೂಕು ಮಂಡಳ ಅಧ್ಯಕ್ಷ ಈರಣ್ಣ ರಾವೂರ, ಗುರು ಬಿದರಿ, ಪಂಡಿತ ಯಂಪೂರೆ, ಗುರು ಮಠ, ಸಂಗಮೇಶ ಡಿಗ್ಗಿ, ಆರೀಫ್ ಅಂತರಗಂಗಿ, ಮಹಾಂತೇಶ ನೂಲನವರ, ಮಹಿಬೂಬ ಮುಲ್ಲಾ, ಸುದರ್ಶನ ಜಿಂಗಾಣಿ, ಶಿವಾನಂದ ಆಲಮೇಲ, ಸಲೀಂ ಮರ್ತೂರ, ಅಸ್ಫಾಕ್ ಕರ್ಜಗಿ ಹಾಜರಿದ್ದರು.