ಪ್ರಜಾಸ್ತ್ರ ಸುದ್ದಿ
ಹುಬ್ಬಳ್ಳಿ: ಮಾಂಸ ಸೇವನೆ ಮಾಡಿ ದೇವಸ್ಥಾನಕ್ಕೆ ಹೋಗಿದ್ದಾರೆ ಅನ್ನೋ ಆರೋಪವನ್ನು ಬಿಜೆಪಿ ಸಿದ್ದರಾಮಯ್ಯನವರ ಮೇಲೆ ಮಾಡಿದೆ. ಇದು ದೊಡ್ಡ ವಿಷಯ ಎಂಬಂತೆ ಚರ್ಚೆ ನಡೆದಿದೆ. ಈ ಬಗ್ಗೆ ಬಿಜೆಪಿ ಮೇಲೆ ವಾಗ್ದಾಳಿ ನಡೆಸಿದ ಶ್ರೀರಾಮ್ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಮಾಂಸ ಸೇವನೆ ಮಾಡಿ ಬರಬೇಡಿ ಎಂದು ದೇವರು ಹೇಳಿಲ್ಲ ಅನ್ನೋದು ಸರಿಯಾಗಿದೆ ಎಂದಿದ್ದಾರೆ.
ಮಾಂಸ ಸೇವನೆ ವಿಚಾರದಲ್ಲಿ ವಿನಾಕಾರಣ ಅವರ ಮೇಲೆ ಆರೋಪ ಮಾಡುವ ಬಿಜೆಪಿಯವರ ವರ್ತನೆ ಅಸಹ್ಯವಾಗುತ್ತಿದೆ. ಮಾಂಸ ಸೇವನೆಯು ಒಂದು ಚರ್ಚೆಯ ವಿಷಯವೇ ಅಲ್ಲ ಎಂದು ಮುತಾಲಿಕ್ ಹೇಳಿದ್ದಾರೆ.