ಅಯೋಧ್ಯೆ ತೀರ್ಪು ನಮ್ಮ ಪರ ಬರಲಿದೆ: ಮುತಾಲಿಕ್

610

ಹುಬ್ಬಳ್ಳಿ: ಅಯೋಧ್ಯೆ ರಾಮನ ಜನ್ಮಸ್ಥಾನದ ದಾಖಲೆ ಒಪ್ಪಿಸಲಾಗಿದೆ. ಆರ್ಕಲಾಜಿಕಲ್ ಇಲಾಖೆಯಿಂದ ಸಂಶೋಧನೆ ಆಗಿವೆ. ರಾಮಮಂದಿರದ ತೀರ್ಪು ನಮ್ಮ ಪರವಾಗಿಯೇ ತೀರ್ಪು ಬರಲಿದೆ ಎಂದು, ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿದ್ದಾರೆ.

ದೇವಸ್ಥಾನದ ಮೇಲೆಯೇ ಮಸೀದಿ ಕಟ್ಟಲಾಗಿದೆ ಎಂದು ದಾಖಲೆವೊದಗಿಸಿದೆ. ತೀರ್ಪು ಬಂದ ದಿನ ಎಲ್ಲ ದೇವಸ್ಥಾನಗಳಲ್ಲಿ ಪೂಜೆ, ಸಿಹಿ ವಿತರಿಸಲಾಗುತ್ತದೆ. ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳಬೇಕು. ವ್ಯತಿರಿಕ್ತ ತೀರ್ಪು ಬಂದರೆ ಹಿಂದು ಸಂಘಟನೆ ಮೂಲಕ ಸಂಸದರಿಗೆ ಮನವಿ ಸಲ್ಲಿಸಲಾಗುತ್ತೆ. ನಮ್ಮ ನಂಬಿಕೆ ವಿರುದ್ಧ ತೀರ್ಪು ಬಂದಿದೆ ಎಂದು ಪಾರ್ಲಿಮೆಂಟಿನ ನಿರ್ಣಯ ತೆಗೆದುಕೊಳ್ಳಲು ವಿನಂತಿಸುತ್ತೇವೆ ಅಂತಾ ಹೇಳಿದ್ರು.

ಪಠ್ಯದಿಂದ ಟಿಪ್ಪು ವಿಚಾರ ಬಿಟ್ಟಿರುವುದು ಸ್ವಾಗತರ್ಹ ಅಂತಾ ಹೇಳಿದ್ರು. ಬಾಂಗ್ಲಾ ವಲಸಿಗರ ವಿಚಾರ ಮಾತ್ನಾಡಿದ ಅವರು, ವಲಸಿಗರನ್ನ ಗುರುತಿಸಿ ಬಾಂಗ್ಲಾಕ್ಕೆ ಬೆಂಗಳೂರಿನ ಪೊಲೀಸ್ ಕಮಿಷನರ್ ಕಳುಹಿಸಿದ್ದಾರೆ. ಇನ್ನುಳಿದವರನ್ನು ಹೊರಹಾಕಬೇಕು ಅಂತಾ ಹೇಳಿದ್ರು. ಇನ್ನು ಗೊಂದಲ್ಲಿರುವ ಬಿಎಸ್ವೈ ಸರ್ಕಾರ ಬಹಳ ದಿನ ಉಳಿಯುವ ಲಕ್ಷಣವಿಲ್ಲ. ಇದು ಅಸ್ಥಿರತೆಯ ಲಕ್ಷಣವೆಂದು ಹೇಳಿದ್ರು.




Leave a Reply

Your email address will not be published. Required fields are marked *

error: Content is protected !!