ಸಿಂದಗಿ/ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಹಾಗೂ ಮಾಜಿ ಸಚಿವ, ಶಾಸಕ ಎಂ.ಸಿ ಮನಗೂಳಿ ಅವರ ಮೂರ್ತಿ ಸುಟ್ಟ ಪ್ರಕಣ ಸಂಬಂಧ, ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ಸಲ್ಲಿಸಲಾಗಿದೆ.
ಮಾಜಿ ಶಾಸಕ ರಮೇಶ ಭೂಸನೂರು ಹಾಗೂ ಬಿಜೆಪಿ ಮುಖಂಡ ಸಂತೋಷ ಪಾಟೀಲ ಡಂಬಳ ಅವರ ನೇತೃತ್ವದ ನಿಯೋಗ ಡಿಜಿಪಿ ನೀಲಮಣಿ ಎನ್ ರಾಜು ಅವರನ್ನ ಇಂದು ಭೇಟಿಯಾಗಿ, ಪ್ರಕರಣದ ಆರೋಪಿಗಳನ್ನು ಕೂಡಲೇ ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಲಾಯ್ತು.
ನವೆಂಬರ್ 29, 2018ರಂದು ಗೋಲಗೇರಿ ಗ್ರಾಮದಲ್ಲಿರುವ ಪ್ರತಿಮೆಯನ್ನ ಸುಟ್ಟಿರುವ ಪ್ರಕರಣ ಸಂಬಂಧ ಕಲಕೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಕಿಡಿಗೇಡಿಗಳನ್ನ ಬಂಧಿಸುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಕೂಡಲೇ ಹೆಚ್ಚಿನ ತನಿಖೆ ನಡೆಸಿ ಆರೋಪಿಗಳನ್ನ ಬಂಧಿಸಬೇಕೆಂದು ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಮಾಜಿ ಶಾಸಕ ರಮೇಶ ಭೂಸನೂರ, ಬಿಜೆಪಿ ಮುಖಂಡ ಸಂತೋಷ ಪಾಟೀಲ ಡಂಬಳ ನಿಯೋಗದಲ್ಲಿ ಸಂದೀಪ ಚೌರ, ರವಿ ನಾಯ್ಕೋಡಿ, ಮಲ್ಲು ಇಂಗಳಗಿ ಇದ್ದು ಈ ವೇಳೆ ಹಾಜರಿದ್ರು.