ಗಾಣಗಾಪುರ ಬಳಿ ಕ್ಲಾಸ್-1 ಗುತ್ತಿಗೆದಾರನ ಮರ್ಡರ್

562

ಕಲಬುರಗಿ: ಕಾರನ್ನ ಬೆನ್ನು ಹತ್ತಿ ಬಂದ ದುಷ್ಕರ್ಮಿಗಳು ಗುತ್ತಿಗೆದಾರರೊಬ್ಬರನ್ನ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಗಾಣಗಾಪುರದ ಬಳಿ ನಡೆದಿದೆ. 46 ವರ್ಷದ ಶಿವಲಿಂಗ ಬಾವಿಕಟ್ಟೆ ಹತ್ಯೆಯಾದ ಗುತ್ತಿಗೆದಾರರಾಗಿದ್ದಾರೆ. ಕಾರಿಗೆ ಡಿಕ್ಕಿ ಹೊಡೆದು ಕಾರೊಳಗಿದ್ದ ಶಿವಲಿಂಗನನ್ನ ಎಳೆದು ಹತ್ಯೆ ಮಾಡಲಾಗಿದೆ.

ಹಳೆ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಅಂತಾ ಹೇಳಲಾಗ್ತಿದೆ. ಕೊಲೆಯ ಹಿಂದೆ ಜಿಲ್ಲಾ ಪಂಚಾಯ್ತಿ ಸದಸ್ಯರೊಬ್ಬರ ಹೆಸರು ಕೇಳಿ ಬಂದಿದ್ದು, ಆತನ ಸಂಬಂಧಿಕರು ಮರ್ಡರ್ ಮಾಡಿಸಿದ್ದಾರೆ ಅಂತಾ ಆರೋಪಿಸಲಾಗಿದೆ. ಕ್ಲಾಸ್-1 ಗುತ್ತಿಗೆದಾರರನಾಗಿದ್ದ ಶಿವಲಿಂಗ ಹಾಗೂ ಸದಸ್ಯನ ನಡುವೆ ಗುತ್ತಿಗೆ ಕೆಲಸ ಪಡೆಯುವ ವಿಚಾರದಲ್ಲಿ ಆಗಾಗ ವಾಗ್ವಾದ ನಡೆಯುತ್ತಿದ್ವು ಎನ್ನಲಾಗ್ತಿದೆ.

ಕೃತ್ಯ ನಡೆದ ಸ್ಥಳಕ್ಕೆ ಪೊಲೀಸ್ ಕಮಿಷನರ್ ಎಂ.ಎನ್ ನಾಗರಾಜ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಫರತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶಿವಲಿಂಗ ಹಾಗೂ ಆರೋಪ ಕೇಳಿ ಬಂದ ಸದಸ್ಯನ ಗುಂಪುಗಳ ನಡುವೆ ತಲಾ 22 ಜನರ ವಿರುದ್ಧ ದೂರು ದಾಖಲಾಗಿವೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸ್ರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!