ಕೋಲಾರ: ಮಾಜಿ ಸಿಎಂಗಳಿಬ್ಬರ ನಡುವೆ ಟಾಕ್ ಫೈಟ್ ನಡೆದಿದೆ. ದೋಸ್ತಿ ಸರ್ಕಾರದ ಟೈಂನಲ್ಲಿ ನಮ್ಮದೆ ಹವಾ ಅಂತಿದ್ದ ನಾಯಕರು ಇದೀಗ ಹಾವು ಮುಂಗೂಸಿ ತರ ಕಚ್ಚಾಡ್ತಿದ್ದಾರೆ. ಅಧಿಕಾರಕ್ಕಾಗಿ ನಾನು ಯಾರ ಮನೆ ಬಾಗಿಲಿಗೆ ಹೋಗಿಲ್ಲ. ಮೈತ್ರಿ ಸರ್ಕಾರವಿದ್ದಾಗ ನನ್ನ ಆಡಳಿತದ ಬಗ್ಗೆ ಸಿದ್ದರಾಮಯ್ಯನವರಿಂದ ನನ್ಗೆ ಸರ್ಟಿಫಿಕೇಟ್ ಬೇಕಾಗಿಲ್ಲವೆಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ.
ಸಿದ್ದರಾಮಯ್ಯನವರ ಬಾದಾಮಿ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳಿಗೆ ಹಣ ಬಿಡುಗಡೆ ಮಾಡಿದ್ದು ಯಾರೆಂದು ಕೇಳಿ ಅಂತಾ ಹೇಳಿದ್ದಾರೆ. ಅಲ್ದೇ, 14 ಲಕ್ಷ ಫಲಾನುಭವಿಗಳಿಗೆ ಮನೆ ಕಟ್ಟಲು ಹೇಳಿದ್ರು. ಮನೆಗಳನ್ನ ಕಟ್ಟಲು ಸಿದ್ಧವಾದವರ ಪರಿಸ್ಥಿತಿ ಏನಾಗಿದೆ ಅನ್ನೋದಕ್ಕೆ ಸಿದ್ದರಾಮಯ್ಯ ಉತ್ತರ ಕೊಟ್ಟರೆ ಸಾಕೆಂದರು.
ಮೈತ್ರಿ ಸರ್ಕಾರದಲ್ಲಿ ಅವರೆ ಸಿಎಲ್ ಪಿ ಲೀಡರ್ ಆಗಿದ್ರು. ನನ್ಗೆ ಸಿಎಂ ಜವಾಬ್ದಾರಿ ಕೊಟ್ಟು ಕೆಲಸ ಮಾಡಿಸಿದ್ದರ ಬಗ್ಗೆ ಈಗ ಮನಸ್ಸಿಗೆ ಬಂದಂತೆ ಮಾತ್ನಾಡುವುದು ಸರಿಯಲ್ಲವೆಂದು ಕಿಡಿ ಕಾರಿದ್ರು. ಇದರ ಜೊತೆಗೆ ನನ್ನ ಆಡಳಿತದಲ್ಲಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಾಡಿದ ಕೆಲಸದ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧವೆಂದು ಸವಾಲು ಹಾಕಿದ್ದಾರೆ.