ಮಾಜಿ ಶಾಸಕರಿಗೆ ಸಿಂದಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಪ್ರಶ್ನೆ

262

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಗಂಗಾ ಕಲ್ಯಾಣ ಯೋಜನೆಯಲ್ಲಿ ಅರ್ಹರಾದ ರೈತ  ಫಲಾನುಭವಿಗಳನ್ನು ರದ್ದುಗೊಳಿಸಿದ್ದಾರೆ ಎಂದು ಹೇಳಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವುದನ್ನು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರಿ ಪ್ರಶ್ನಿಸಿದ್ದಾರೆ. ಪ್ರತಿಭಟನೆಗೆ ಮೊದಲು ರದ್ದುಗೊಳಿಸಿರುವ ಸರ್ಕಾರದ ಯಾವುದಾದರೂ ಆದೇಶ ಇದ್ದರೆ ತೋರಿಸಲಿ. ಆಗ ಪ್ರತಿಭಟನೆಗೆ ಒಂದು ಅರ್ಥ ಬರುತ್ತೆ ಎಂದಿದ್ದಾರೆ.

ಮಾಜಿ ಶಾಸಕರು ತಾಲೂಕಿಗೆ ತಂದ 125 ಕೋಟಿ ರೂಪಾಯಿ ಅನುದಾನದ ದಾಖಲೆ ಕೇಳಿದ್ದರು. ಶಾಸಕ ಅಶೋಕ ಮನಗೂಳಿಯವರು ಮಾಧ್ಯಮಗೋಷ್ಠಿ ನಡೆಸಿ ದಾಖಲೆ ಬಿಡುಗಡೆ ಮಾಡಿದ್ದಾರೆ. ಆದರೆ, ಮಾಜಿ ಶಾಸಕರು ತಮ್ಮ ಅವಧಿಯಲ್ಲಿ ಸಿಂದಗಿಗೆ 5 ಸಾವಿರ ಮನೆ, ಆಲಮೇಲಕ್ಕೆ 2 ಸಾವಿರ ಮನೆ ತಂದ ದಾಖಲೆ ಕೇಳಿದ್ದಕ್ಕೆ ಇದೂವರೆಗೂ ಕೊಟ್ಟಿಲ್ಲ. ನಮ್ಮಂತೆ ನೀವು ದಾಖಲೆಗಳನ್ನು ಮತಕ್ಷೇತ್ರದ ಜನತೆಗೆ ಕೊಡಬೇಕೆಂದು ನಿರಿಕ್ಷೀಸುತ್ತೇನೆ ಎಂದು ಪತ್ರಿಕಾ ಪ್ರಕಟಣೆಯ ಮೂಲಕ ಕೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!