ಪ್ರಾಣ ಪ್ರತಿಷ್ಠೆಗೂ ಮೊದಲೇ ರಾಮನ ವಿಗ್ರಹ ಫೋಟೋ ಸೋರಿಕೆ

141

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಅಯೋಧ್ಯೆಯಲ್ಲಿನ ರಾಮ ಮಂದಿರ ಜನವರಿ 22ರಂದು ಉದ್ಘಾಟನೆಯಾಗಲಿದೆ. ಆದರೆ, ಇದಕ್ಕೂ ಮೊದಲೇ ಗರ್ಭಗುಡಿಯಲ್ಲಿನ ರಾಮ್ ಲಲ್ಲಾ ಫೋಟೋ ಸೋರಿಕೆಯಾಗಿದೆ. ಶುಕ್ರವಾರ ಸಂಜೆ ಫೋಟೋ ಎಲ್ಲೆಡೆ ವೈರಲ್ ಆಗಿದ್ದು, ಶ್ರೀ ರಾಮ ಜನ್ಮಭೂಮಿಯ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಾಣ ಪ್ರತಿಷ್ಠಾಪನೆಗೂ ಮೊದಲೇ ವಿಗ್ರಹದ ಕಣ್ಣುಗಳನ್ನು ಬಹಿರಂಗ ಪಡಿಸಿರುವುದು ಸರಿಯಲ್ಲ. ಮೂರ್ತಿಯ ದೇಹವನ್ನು ಬಟ್ಟೆಯಿಂದ ಮುಚ್ಚಲಾಗಿದೆ. ಪ್ರಾಣಪ್ರತಿಷ್ಠಾಪನೆಗೂ ಮೊದಲೇ ಫೋಟೋ ಬಹಿರಂಗಗೊಂಡಿದ್ದರೆ, ಅದನ್ನು ಸೋರಿಕೆ ಮಾಡಿದ್ದು ಯಾರು ಎನ್ನುವ ತನಿಖೆಯಾಗಬೇಕು ಎಂದಿದ್ದಾರೆ.

ಕರ್ನಾಟಕದ ಕಪ್ಪು ಶಿಲೆಯಲ್ಲಿ ರಾಮನ ಮೂರ್ತಿ ಕೆತ್ತಲಾಗಿದೆ. ಮೈಸೂರು ಮೂಲದ ಶಿಲ್ಪಿ ಅರುಣ್ ಯೋಗಿರಾಜ್ ವಿಗ್ರಹವನ್ನು ತಯಾರಿಸಿದ್ದಾರೆ. 51 ಇಂಚಿನ ವಿಗ್ರಹ ಬುಧವಾರ ಸಂಜೆ ಅಯೋಧ್ಯೆ ತಲುಪಿದೆ. ಜನವರಿ 22ರಂದು ಪ್ರಧಾನಿ ಮೋದಿ ರಾಮ ಮಂದಿರ ಉದ್ಘಾಟಿಸಲಿದ್ದಾರೆ.




Leave a Reply

Your email address will not be published. Required fields are marked *

error: Content is protected !!